18 ವರ್ಷದೊಳಗಿನ ಮಕ್ಕಳ ಮನಸ್ಸು ಮುಗ್ಧತೆಯಿಂದ ಕೂಡಿರುತ್ತದೆ. ಇದರಿಂದ ಹಕ್ಕುಗಳು ಉಲ್ಲಂಘನೆಯಾಗಿ ಮಕ್ಕಳು ಸಮಸ್ಯೆ ಎದುರಿಸಿರುವ ನಿದರ್ಶನ ನಮ್ಮ ಮುಂದೆ ಸಾಕಷ್ಟಿವೆ. ಮಕ್ಕಳ ರಕ್ಷಣೆಗೆ ಕಾಯಿದೆ, ಕಾನೂನು ಇದ್ದರೂ ಕೂಡ ಇಂದಿಗೂ ಬಾಲ್ಯ ವಿವಾಹ, ದೌರ್ಜನ್ಯ, ಭ್ರೂಣ ಹತ್ಯೆ, ಬಾಲ ಕಾರ್ಮಿಕ ಪದ್ಧತಿ, ಅತ್ಯಾಚಾರದಂಥ ಪ್ರಕರಣಗಳು ಜೀವಂತವಾಗಿವೆ ಎಂದು ಹೇಳಿದರು.