ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬೀದರ್‌ | ಮಳೆಗಾಲ ಎದುರಿಸಲು ಭರಪೂರ ಸಿದ್ಧತೆ: ಹೊಸ ಚರಂಡಿಗಳ ನಿರ್ಮಾಣ

Published : 20 ಮೇ 2024, 4:48 IST
Last Updated : 20 ಮೇ 2024, 4:48 IST
ಫಾಲೋ ಮಾಡಿ
Comments
ಬೀದರ್‌ನ ಮೈಲೂರ ಸಿಎಂಸಿ ರಿಂಗ್‌ರೋಡ್‌ ಸಮೀಪ ಚರಂಡಿ ನಿರ್ಮಾಣಕ್ಕಾಗಿ ಜೆಸಿಬಿಯಿಂದ ನೆಲ ಅಗೆಯುತ್ತಿರುವುದು
ಬೀದರ್‌ನ ಮೈಲೂರ ಸಿಎಂಸಿ ರಿಂಗ್‌ರೋಡ್‌ ಸಮೀಪ ಚರಂಡಿ ನಿರ್ಮಾಣಕ್ಕಾಗಿ ಜೆಸಿಬಿಯಿಂದ ನೆಲ ಅಗೆಯುತ್ತಿರುವುದು
ಶರವೇಗದಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕೆಲಸ
ಶರವೇಗದಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕೆಲಸ
‘ನಗರಸಭೆ ಉತ್ತಮ ಕೆಲಸ’
ಮಳೆಗಾಲದಲ್ಲಿ ಮಳೆ ನೀರು ಹರಿದಾಗ ರಸ್ತೆ ಯಾವುದು ಚರಂಡಿ ಯಾವುದು ಅಂತ ಗೊತ್ತಾಗುತ್ತಿರಲಿಲ್ಲ. ಜನ ಬಹಳ ಭಯದಲ್ಲಿ ಓಡಾಡುವ ಪರಿಸ್ಥಿತಿ ಇತ್ತು. ಅನೇಕರು ಬಿದ್ದು ಗಾಯಗೊಳ್ಳುತ್ತಿದ್ದರು. ಈಗ ಚರಂಡಿ ಕೆಲಸ ನಡೆಯುತ್ತಿರುವುದು ಉತ್ತಮ. ಇದು ಬಹಳ ಅನಿವಾರ್ಯ ಇತ್ತು. –ಸಂತೋಷ ಮೈಲೂರ್‌ ಸಿಎಂಸಿ ಕಾಲೊನಿ ನಿವಾಸಿ
‘ಮನೆಗಳಿಗೆ ನೀರು ನುಗ್ಗುತ್ತಿತ್ತು’
ಚರಂಡಿ ಇರದ ಕಾರಣ ಮಳೆ ನೀರು ಬೇಕಾಬಿಟ್ಟಿ ಹರಿಯುತ್ತಿತ್ತು. ಹೊಲಸು ನೀರೆಲ್ಲ ರಸ್ತೆ ಮೇಲೆ ನಿಲ್ಲುತ್ತಿತ್ತು. ಮಳೆ ಜಾಸ್ತಿಯಾದಾಗ ಮನೆಗಳಿಗೆ ನುಗ್ಗಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಜನರಿಗೆ ಓಡಾಡಲು ಸಮಸ್ಯೆಯಾಗುತ್ತಿತ್ತು. ಮಳೆಗಾಲಕ್ಕೂ ಮುನ್ನವೇ ಕೆಲಸ ಮಾಡುತ್ತಿರುವುದು ಉತ್ತಮ. –ಮೊಹಮ್ಮದ್‌ ಇಸ್ಮಾಯಿಲ್‌ ಮೈಲೂರ್‌ ರಿಂಗ್‌ರೋಡ್‌ ನಿವಾಸಿ
ಬಗೆಹರಿಯದ ಫುಟ್‌ಪಾತ್‌ ಸಮಸ್ಯೆ
ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಲಾಗಿದೆ. ಕೆಲವೆಡೆಯಂತೂ ರಾಜಾರೋಷವಾಗಿ ಅದರ ಮೇಲೆಯೇ ಶೆಡ್‌ಗಳನ್ನು ಹಾಕಿ ಮಳಿಗೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆ ಮೇಲೆ ಓಡಾಡುವಂತಾಗಿದೆ. ಅಪಘಾತಗಳಿಗೆ ಕಾರಣವಾಗುತ್ತಿದೆ. ಸುಸಜ್ಜಿತ ಪಾದಚಾರಿ ಮಾರ್ಗಗಳಿದ್ದರೂ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಆದ್ಯತೆ ಮೇಲೆ ಅತಿಕ್ರಮಣ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿಇದ್ದಾಗ ಎಲ್ಲ ಕಡೆಗಳಲ್ಲಿ ವಿಶಾಲವಾದ ರಸ್ತೆಗಳು ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ ಫುಟ್‌ಪಾತ್‌ಗಳನ್ನು ಅತಿಕ್ರಮಣ ಮಾಡಿರುವುದರಿಂದ ಜನರಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ಹೋಟೆಲ್‌ ಹಣ್ಣು ಪಾನಿಪುರಿ ಹೀಗೆ ನಾನಾ ಬಗೆಯ ವ್ಯಾಪಾರ ವಹಿವಾಟು ಪಾದಚಾರಿ ಮಾರ್ಗಗಳ ಮೇಲೆ ನಡೆಸಲಾಗುತ್ತಿದೆ. ಇನ್ನು ಬರೀದ್ ಷಾಹಿ ಉದ್ಯಾನದ ಎದುರಿನ ಫುಟ್‌ಪಾತ್‌ ದಿನೇ ದಿನೇ ಹಾಳಾಗುತ್ತಿದೆ. ಅದನ್ನು ಸರಿಪಡಿಸಬೇಕು’ ಎಂದು ಸ್ಥಳೀಯರಾದ ರಾಮರಾವ್‌ ಶೇಖರ್‌ ರಾಜು ಬಸವರಾಜ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT