ದೇಶದಾದ್ಯಂತ ಕೊರೊನಾ ಹರಡಿದ್ದರಿಂದ ಲಾಕ್ಡೌನ್ ಇರುವುದರಿಂದ ವಿವಿಧೆಡೆ ಕೆಲಸಕ್ಕೆ ಹೋದವರು ನಡೆದುಕೊಂಡು ಸ್ವಂತ ಊರುಗಳಿಗೆ ವಾಪಸ್ ಬರುತ್ತಿದ್ದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಮೂಲಕವೂ ಎರಡು ದಿನಗಳಿಂದ ಅನೇಕರು ಹಾದು ಹೋಗುತ್ತಿದ್ದಾರೆ. ಆಂಧ್ರ, ತೆಲಂಗಾಣದವರಲ್ಲದೆ ರಾಜ್ಯದ ಬೀದರ್, ಕಲಬುರ್ಗಿ ಜಿಲ್ಲೆಯ ವಿವಿಧ ಗ್ರಾಮದವರು ಇಲ್ಲಿಂದ ಹೋದರು. ಇಲ್ಲಿಗೆ ಬಂದಿರುವ ಬೀದರ್ ಜಿಲ್ಲೆಯ ವಿವಿಧ ತಾಲ್ಲೂಕುಗಳ
ಜನರ ಆರೋಗ್ಯ ತಪಾಸಣೆ ಹಾಗೂ ಇತರೆ ದಾಖಲೆ ಪರಿಶೀಲಿಸಿ ಅವರವರ ಗ್ರಾಮಗಳಿಗೆ ತೆರಳುವುದಕ್ಕಾಗಿ ಆಡಳಿತದಿಂದ ಬಸ್ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು.