‘ತಾಲ್ಲೂಕಿನ ಯನಗುಂದಾ, ಔರಾದ್, ಚಿಂತಾಕಿ, ಎಕಂಬಾದಲ್ಲಿ ಸುಮಾರು 300 ಕುಟುಂಬಗಳು ಕುಂಬಾರಿಕೆ ವೃತ್ತಿ ನೆಚ್ಚಿಕೊಂಡಿವೆ. ಲಾಕ್ಡೌನ್ನಿಂದ ಈ ಎಲ್ಲ ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸಿವೆ. ಕುಂಬಾರ ಸಮಾಜದ ಅಭಿವೃದ್ಧಿಗೆ ಮೀಸಲಿಡಲಾದ ₹20 ಕೋಟಿ ಹಣವನ್ನು ಇವರ ಬದುಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರ್ಚು ಮಾಡಬೇಕು’ ಎಂದು ಬಾಲಾಜಿ ಕುಂಬಾರ ಆಗ್ರಹಿಸಿದ್ದಾರೆ.