ತಾಲ್ಲೂಕು ಕೇಂದ್ರದ ಏಕೈಕ ಮುಖ್ಯರಸ್ತೆ ದಶಕದಿಂದ ದುರಸ್ತಿ ಕಂಡಿಲ್ಲ. ಜನ ಮೊಳಕಾಲುದ್ದದ ಗುಂಡಿಯಲ್ಲಿ ಓಡಾಡಬೇಕಾಗಿದೆ. ಪಟ್ಟಣದ ಜನ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದಾರೆ. ಆದರೂ ಬವಣೆ ತಪ್ಪಿಲ್ಲ. ಪಟ್ಟಣದ ಇತರೆ ರಸ್ತೆಗಳು ಸಹ ಹಾಳಾಗಿವೆ. ಈಚೆಗೆ ಸುರಿದ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ಹೂಳು ತುಂಬಿ ಗಬ್ಬು ನಾರುತ್ತಿದೆ. ಪಟ್ಟಣ ಪಂಚಾಯಿತಿ ಸದಸ್ಯರನ್ನು ಕೇಳಿದರೆ ಇನ್ನು ನಮ್ಮ ಆಡಳಿತ ಮಂಡಳಿ ರಚನೆಯಾಗಿಲ್ಲ. ಹೀಗಾಗಿ ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಜನ ತಿಳಿಸುತ್ತಾರೆ.