ಈ ಬಗ್ಗೆ ಪ್ರಕಟಣೆ ಹೊರಡಿಸಿದ ಅವರು,‘ಈ ವಾರ್ಡ್ನ ಬಿಜೆಪಿ ಪಕ್ಷದವರಾದ ನಗರಸಭೆ ಸದಸ್ಯ ಮಾರುತಿ ಲಾಡೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಸ್ಪತ್ರೆ ಖರ್ಚಿಗಾಗಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಹೊರತುಪಡಿಸಿ ಯಾರೂ ಸಹಾಯ ಮಾಡಲಿಲ್ಲ. ಅವರು ಮೃತಪಟ್ಟು 5 ದಿನಗಳಾದರೂ ಈ ಕ್ಷೇತ್ರದ ಅಭ್ಯರ್ಥಿ ಶರಣು ಸಲಗರ ಹಾಗೂ ಸಂಸದ ಭಗವಂತ ಖೂಬಾ ಹಾಗೂ ಇತರೆ ಮುಖಂಡರು ಅವರ ಮನೆಗೆ ಬಂದು ಕುಟುಂಬದ ಪರಿಸ್ಥಿತಿಯ ಬಗ್ಗೆ ವಿಚಾರಿಸಿಲ್ಲ. ಆದ್ದರಿಂದ ಈ ತೀರ್ಮಾನಕ್ಕೆ ಬರಲಾಗಿದೆ’ ಎಂದಿದ್ದಾರೆ.