<p><strong>ಬಸವಕಲ್ಯಾಣ:</strong> ‘ಬಸವಾದಿ ಶರಣರ ಕಾಯಕಭೂಮಿಯಾದ ಈ ನೆಲದಲ್ಲಿ 2027ರಲ್ಲಿ ಬಸವಭಾರತ ಉತ್ಸವ ಆಯೋಜಿಸಲು ನಿರ್ಣಯಿಸಲಾಗಿದೆ’ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಚಾಲಕ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ.</p>.<p>ನಗರದಲ್ಲಿ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದ ಅವರು, ‘ಬಸವತತ್ವ ಸಾರುವುದು, ಮಾನವೀಯ ಮೌಲ್ಯ ಬಿತ್ತುವುದು, ಜಾಗತಿಕ ಸೌಹಾರ್ದತೆ ಬೆಸೆಯುವ ಉತ್ಸವ ಇದಾಗಲಿದೆ. 2027ರ ಡಿಸೆಂಬರ್ 23ರಿಂದ 27 ರವರೆಗೆ ಉತ್ಸವ ನಡೆಯಲಿದೆ. ಉತ್ಸವದಲ್ಲಿ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸಂಘ ಸಂಸ್ಥೆಯವರು ಸಹಕರಿಸಬೇಕು’ ಎಂದು ಹೇಳಿದರು.</p>.<p>ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಬಸವ ಭಾರತ ಉತ್ಸವ ಉತ್ತಮ ಆಶಯ ಹೊಂದಿದೆ. ಉತ್ಸವದ ಮೊದಲ ದಿನದ ದಾಸೋಹ ವ್ಯವಸ್ಥೆ ತಮ್ಮ ಮಠದಿಂದ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.</p>.<p>ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಮಾತನಾಡಿ, ‘ಈ ನೆಲದ ಉದಾತ್ತ ತತ್ವ ವಿಶ್ವದಾದ್ಯಂತ ಪಸರಿಸಲಿ. ಎಲ್ಲೆಡೆಯ ಜನ ಕಲ್ಯಾಣದ ಕಡೆ ಮುಖ ಮಾಡಬೇಕು ಎಂಬುದೇ ಉತ್ಸವ ಧ್ಯೇಯವಾಗಿದೆ’ ಎಂದು ಹೇಳಿದರು.</p>.<p>ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಈ ಉತ್ಸವದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಬೇಕು. ಅದ್ಧೂರಿ ಕಾರ್ಯಕ್ರಮವಾಗಲಿ’ ಎಂದು ಹೇಳಿದರು.</p>.<p>ಮಹೇಶ ಪಾಟೀಲ, ಚನ್ನಬಸವ ಬಳತೆ ಮಾತನಾಡಿದರು. ಬೇಲೂರ ಪಂಚಾಕ್ಷರಿ ಸ್ವಾಮೀಜಿ, ಬಸವತತ್ವ ಪ್ರಚಾರ ಸಂಸ್ಥೆಯ ಡಾ.ಬಸವರಾಜ ಪಂಡಿತ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ಡಾ.ಅಮರನಾಥ ಸೋಲಪುರೆ, ಶಂಕರೆಪ್ಪ ಪಾಟೀಲ, ದೇವಿಕಾ ನಾಗೂರೆ, ಸೂರ್ಯಕಾಂತ ಮಠ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಬಸವಾದಿ ಶರಣರ ಕಾಯಕಭೂಮಿಯಾದ ಈ ನೆಲದಲ್ಲಿ 2027ರಲ್ಲಿ ಬಸವಭಾರತ ಉತ್ಸವ ಆಯೋಜಿಸಲು ನಿರ್ಣಯಿಸಲಾಗಿದೆ’ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಚಾಲಕ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ.</p>.<p>ನಗರದಲ್ಲಿ ಬಸವಕಲ್ಯಾಣ ಕ್ಷೇತ್ರ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದ ಅವರು, ‘ಬಸವತತ್ವ ಸಾರುವುದು, ಮಾನವೀಯ ಮೌಲ್ಯ ಬಿತ್ತುವುದು, ಜಾಗತಿಕ ಸೌಹಾರ್ದತೆ ಬೆಸೆಯುವ ಉತ್ಸವ ಇದಾಗಲಿದೆ. 2027ರ ಡಿಸೆಂಬರ್ 23ರಿಂದ 27 ರವರೆಗೆ ಉತ್ಸವ ನಡೆಯಲಿದೆ. ಉತ್ಸವದಲ್ಲಿ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸಂಘ ಸಂಸ್ಥೆಯವರು ಸಹಕರಿಸಬೇಕು’ ಎಂದು ಹೇಳಿದರು.</p>.<p>ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಬಸವ ಭಾರತ ಉತ್ಸವ ಉತ್ತಮ ಆಶಯ ಹೊಂದಿದೆ. ಉತ್ಸವದ ಮೊದಲ ದಿನದ ದಾಸೋಹ ವ್ಯವಸ್ಥೆ ತಮ್ಮ ಮಠದಿಂದ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.</p>.<p>ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಮಾತನಾಡಿ, ‘ಈ ನೆಲದ ಉದಾತ್ತ ತತ್ವ ವಿಶ್ವದಾದ್ಯಂತ ಪಸರಿಸಲಿ. ಎಲ್ಲೆಡೆಯ ಜನ ಕಲ್ಯಾಣದ ಕಡೆ ಮುಖ ಮಾಡಬೇಕು ಎಂಬುದೇ ಉತ್ಸವ ಧ್ಯೇಯವಾಗಿದೆ’ ಎಂದು ಹೇಳಿದರು.</p>.<p>ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಈ ಉತ್ಸವದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಬೇಕು. ಅದ್ಧೂರಿ ಕಾರ್ಯಕ್ರಮವಾಗಲಿ’ ಎಂದು ಹೇಳಿದರು.</p>.<p>ಮಹೇಶ ಪಾಟೀಲ, ಚನ್ನಬಸವ ಬಳತೆ ಮಾತನಾಡಿದರು. ಬೇಲೂರ ಪಂಚಾಕ್ಷರಿ ಸ್ವಾಮೀಜಿ, ಬಸವತತ್ವ ಪ್ರಚಾರ ಸಂಸ್ಥೆಯ ಡಾ.ಬಸವರಾಜ ಪಂಡಿತ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ಡಾ.ಅಮರನಾಥ ಸೋಲಪುರೆ, ಶಂಕರೆಪ್ಪ ಪಾಟೀಲ, ದೇವಿಕಾ ನಾಗೂರೆ, ಸೂರ್ಯಕಾಂತ ಮಠ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>