<p><strong>ಬೀದರ್: </strong>ಚಿಕ್ಕಪೇಟದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಲಾಕ್ಡೌನ್ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು.</p>.<p>ಕಾರ್ಮಿಕರು, ನಿರ್ಗತಿಕರು, ವಿಧವೆಯರು, ಅಂಗವಿಕಲರು ಮಾನಸಿಕ ಅಸ್ವಸ್ಥರು ಹಾಗೂ ಆಟೊ ಚಾಲಕರಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು. ನಗರದ ಲೇಬರ್ ಕಾಲೊನಿ, ಪಕ್ಕಲವಾಡ, ಶಹಾಗಂಜ್, ಬೀದರ್ ತಾಲ್ಲೂಕಿನ ದದ್ದಾಪೂರ, ಸೋಲಪುರ, ಔರದ್ ತಾಲ್ಲೂಕಿನ ಹೆಡಗಾಪುರ, ಕೊಳ್ಳೂರ ಮತ್ತು ಕರಂಜಿ (ಬಿ) ಗ್ರಾಮಗಳ 400 ಫಲಾನುಭವಿಗಳಿಗೆ ಕಿಟ್ ಕೊಡಲಾಯಿತು.</p>.<p>ಬೀದರ್ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಜೇಮ್ಸ್ ಪೌಲ್ ಅಧ್ಯಕ್ಷತೆ ವಹಿಸಿದ್ದರು. ಫಾದರ್ ವಿಮಲ್ ಆ್ಯಂಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ನೆಲ್ಸನ್ ರಾಚೆ, ಡ್ಯಾನಿಯಲ್ ಸಾಗರ, ಪ್ರಭಾಕರ, ಜಾನ್ಸನ್, ಸೊಲೊಮನ್, ಡ್ಯಾನಿಯಲ್ ಮೇತ್ರೆ, ಪವಿತ್ರಾ, ಎಸ್ತೇರ್, ಸಂತೋಷ, ಗೀತಾ, ಸೀಮಪ್ಪ, ಲೋಕೇಶ ಇದ್ದರು.</p>.<p>ಅವಿನಾಶ ನಿರೂಪಿಸಿದರು. ನಳಿನಿ ಸ್ವಾಗತಿಸಿದರು. ರವಿಕುಮಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಚಿಕ್ಕಪೇಟದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಲಾಕ್ಡೌನ್ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು.</p>.<p>ಕಾರ್ಮಿಕರು, ನಿರ್ಗತಿಕರು, ವಿಧವೆಯರು, ಅಂಗವಿಕಲರು ಮಾನಸಿಕ ಅಸ್ವಸ್ಥರು ಹಾಗೂ ಆಟೊ ಚಾಲಕರಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು. ನಗರದ ಲೇಬರ್ ಕಾಲೊನಿ, ಪಕ್ಕಲವಾಡ, ಶಹಾಗಂಜ್, ಬೀದರ್ ತಾಲ್ಲೂಕಿನ ದದ್ದಾಪೂರ, ಸೋಲಪುರ, ಔರದ್ ತಾಲ್ಲೂಕಿನ ಹೆಡಗಾಪುರ, ಕೊಳ್ಳೂರ ಮತ್ತು ಕರಂಜಿ (ಬಿ) ಗ್ರಾಮಗಳ 400 ಫಲಾನುಭವಿಗಳಿಗೆ ಕಿಟ್ ಕೊಡಲಾಯಿತು.</p>.<p>ಬೀದರ್ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಜೇಮ್ಸ್ ಪೌಲ್ ಅಧ್ಯಕ್ಷತೆ ವಹಿಸಿದ್ದರು. ಫಾದರ್ ವಿಮಲ್ ಆ್ಯಂಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ನೆಲ್ಸನ್ ರಾಚೆ, ಡ್ಯಾನಿಯಲ್ ಸಾಗರ, ಪ್ರಭಾಕರ, ಜಾನ್ಸನ್, ಸೊಲೊಮನ್, ಡ್ಯಾನಿಯಲ್ ಮೇತ್ರೆ, ಪವಿತ್ರಾ, ಎಸ್ತೇರ್, ಸಂತೋಷ, ಗೀತಾ, ಸೀಮಪ್ಪ, ಲೋಕೇಶ ಇದ್ದರು.</p>.<p>ಅವಿನಾಶ ನಿರೂಪಿಸಿದರು. ನಳಿನಿ ಸ್ವಾಗತಿಸಿದರು. ರವಿಕುಮಾರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>