<p><strong>ಬೀದರ್: </strong>ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಕನಕ ಬ್ರಿಗೇಡ್ ವತಿಯಿಂದ ಭಾಲ್ಕಿಯ ಲೆಕ್ಚರ್ ಕಾಲೊನಿಯ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಆಹಾರಧಾನ್ಯದ ಕಿಟ್ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು.</p>.<p>ಬ್ರಿಗೇಡ್ ಅಧ್ಯಕ್ಷ ರಾಕೇಶ ಚನ್ನಪ್ಪನೋರ್ ಅಕ್ಕಿ, ಬೇಳೆ, ಇತರ ಸಾಮಗ್ರಿ ಒಳಗೊಂಡ ಕಿಟ್ ಹಾಗೂ ಹಣ್ಣು ವಿತರಿಸಿದರು.</p>.<p>ಅನಾಥ ಮಕ್ಕಳ ರಕ್ಷಣೆ ಹಾಗೂ ಪೋಷಣೆ ಎಲ್ಲರ ಹೊಣೆಯಾಗಿದೆ. ಅವರಿಗೆ ಸಹಾಯಹಸ್ತ ಚಾಚುವುದು ಮಾನವೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು.</p>.<p>ಕನಕ ಬ್ರಿಗೇಡ್ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದೆ ಎಂದು ತಿಳಿಸಿದರು.<br />ಸಂಸ್ಥೆಯು ಕನಕದಾಸರ ತತ್ವಗಳ ಪ್ರಚಾರ ಹಾಗೂ ಸಾಮಾಜಿಕ ಬದಲಾವಣೆಗೆ ಕಾರಣವಾಗುವಂತಹ ಕಾರ್ಯಕ್ರಮಗಳನ್ನು ಬರುವ ದಿನಗಳಲ್ಲಿ ಆಯೋಜಿಸಲಿದೆ ಎಂದು ಹೇಳಿದರು.</p>.<p>ಸನ್ನಿ ಭಾಲ್ಕಿ, ಜೈಪಾಲ್, ಭರತ್ ಕಲವಾಡಿ, ಧನರಾಜ, ಪೃಥ್ವಿ, ಪ್ರಲ್ಹಾದ್, ಪ್ರಶಾಂತ, ರಾಹುಲ್, ಅಂಬಾದಾಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಕನಕ ಬ್ರಿಗೇಡ್ ವತಿಯಿಂದ ಭಾಲ್ಕಿಯ ಲೆಕ್ಚರ್ ಕಾಲೊನಿಯ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಆಹಾರಧಾನ್ಯದ ಕಿಟ್ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು.</p>.<p>ಬ್ರಿಗೇಡ್ ಅಧ್ಯಕ್ಷ ರಾಕೇಶ ಚನ್ನಪ್ಪನೋರ್ ಅಕ್ಕಿ, ಬೇಳೆ, ಇತರ ಸಾಮಗ್ರಿ ಒಳಗೊಂಡ ಕಿಟ್ ಹಾಗೂ ಹಣ್ಣು ವಿತರಿಸಿದರು.</p>.<p>ಅನಾಥ ಮಕ್ಕಳ ರಕ್ಷಣೆ ಹಾಗೂ ಪೋಷಣೆ ಎಲ್ಲರ ಹೊಣೆಯಾಗಿದೆ. ಅವರಿಗೆ ಸಹಾಯಹಸ್ತ ಚಾಚುವುದು ಮಾನವೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು.</p>.<p>ಕನಕ ಬ್ರಿಗೇಡ್ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದೆ ಎಂದು ತಿಳಿಸಿದರು.<br />ಸಂಸ್ಥೆಯು ಕನಕದಾಸರ ತತ್ವಗಳ ಪ್ರಚಾರ ಹಾಗೂ ಸಾಮಾಜಿಕ ಬದಲಾವಣೆಗೆ ಕಾರಣವಾಗುವಂತಹ ಕಾರ್ಯಕ್ರಮಗಳನ್ನು ಬರುವ ದಿನಗಳಲ್ಲಿ ಆಯೋಜಿಸಲಿದೆ ಎಂದು ಹೇಳಿದರು.</p>.<p>ಸನ್ನಿ ಭಾಲ್ಕಿ, ಜೈಪಾಲ್, ಭರತ್ ಕಲವಾಡಿ, ಧನರಾಜ, ಪೃಥ್ವಿ, ಪ್ರಲ್ಹಾದ್, ಪ್ರಶಾಂತ, ರಾಹುಲ್, ಅಂಬಾದಾಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>