‘ತಂದೆ ಸಂಗಯ್ಯನವರು ಜಾನಪದ ಕಲಾವಿದ ಆಗಿದ್ದರು. ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದರು. ಸ್ವತಃ ಭಜನಾ ಪದ್ಯ ರಚಿಸಿದ್ದರು. ಅನುಭವ, ತತ್ವಪದ ಹಾಡುತ್ತಿದ್ದರು. ಅವರ ಪ್ರೇರಣೆಯಿಂದಲೇ ನಾನೂ ಜಾನಪದ ಕಲಾವಿದನಾದೆ. ಜಾತ್ರೆ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆಗೆ ಹಾಗೂ ಮನೆ ಕಾರ್ಯಕ್ರಮಗಳಲ್ಲಿನ ಪಾಲ್ಗೊಳ್ಳುತ್ತೇನೆ. ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಕಾರವೂ ಬಹಳಷ್ಟಿದೆ’ ಎಂದು ವೈಜನಾಥಯ್ಯ ಮಠಪತಿ ಹೇಳಿದ್ದಾರೆ.