ಕಾಲೇಜು ವತಿಯಿಂದ ಅಮಲಾಪುರ, ಕೊಳಾರ (ಬಿ), ಆಣದೂರು, ಅಷ್ಟೂರು ಹಾಗೂ ಗೋರನಳ್ಳಿ ಗ್ರಾಮಗಳನ್ನು ದತ್ತು ಪಡೆಯಲಾಗಿದೆ. ಎನ್ಎಸ್ಎಸ್ ಘಟಕ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಗ್ರಾಮಗಳಲ್ಲಿ ಮನೆಗೊಂದು ಸಸಿ ನೆಡಲಾಗಿದೆ. ಪರಿಸರ, ಆರೋಗ್ಯ, ಸ್ವಚ್ಛತೆ, ಶೌಚಾಲಯ ಬಳಕೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ತಪಾಸಣೆ ಶಿಬಿರಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ತಿಳಿಸಿದರು.