ಲಲಿತಮ್ಮ ಎಂದಿನಂತೆ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಬಂದಿದ್ದರೆ, ಮನೆಗೆಲಸ ಮಾಡುವ ದುರ್ಗಮ್ಮ ದೇವರ ದರ್ಶನ ಪಡೆದು ದೇವಸ್ಥಾನದ ಎದುರಿನ ಕಟ್ಟೆಯ ಮೇಲೆ ಕೂತಿದ್ದರು. ದೇವಪ್ಪ ವಡ್ಡರ್ ಅಲ್ಲಿಗೆ ಬಂದು ದೇವಸ್ಥಾನದ ಒಳಗೆ ಕಸ,ಕಟ್ಟಿಗೆ ಹಾಗೂ ಕಲ್ಲುಗಳನ್ನು ಹಾಕಿದ. ಇದನ್ನು ಕಂಡ ಇಬ್ಬರು ಮಹಿಳೆಯರು ದೇವಪ್ಪನನ್ನು ಪ್ರಶ್ನಿಸಿದಾಗ, ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು.