<p><strong>ಔರಾದ್</strong>: ಪರಿಸರ ಜಾಗೃತಿಗಾಗಿ ಸರ್ಕಾರದ ಹತ್ತಾರು ಕಾರ್ಯಕ್ರಮಗಳ ನಡುವೆಯೂ ಇಲ್ಲಿಯ ಯುವದಂಪತಿ ಪರಿಸರ ಸ್ನೇಹಿ ಸಗಣಿ ಗಣಪ ಪ್ರತಿಮೆ ಹಾಗೂ ವಿಭೂತಿ ತಯಾರಿಸಿ ಗಮನ ಸೆಳೆದಿದ್ದಾರೆ.</p>.<p>ಎಂಜಿನಿಯರ್ ಓದಿರುವ ಪಟ್ಟಣದ ನಿವಾಸಿ ವೀರೇಶ್ ಮುದ್ದಾ, ತನ್ನ ಖಾಸಗಿ ಕೆಲಸದ ಜತೆಗೆ ಬಿಡುವಿನ ವೇಳೆಯಲ್ಲಿ ಪತ್ನಿ ಕಾವೇರಿ ಜತೆ ಪರಿಸರ ಸ್ನೇಹಿ ಕೆಲಸದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.</p>.<p>ಇಲ್ಲಿಯ ಅಮರೇಶ್ವರ ಗೋಶಾಲೆಯ ಅಭಿಯಾನಿಯೂ ಆಗಿರುವ ವೀರೇಶ್, ಕಳೆದ ಎರಡು ವರ್ಷಗಳಿಂದ ಆಕಳು ಸಗಣಿಯಿಂದ ವಿಭೂತಿ ತಯಾರಿಸಿ ಯಶಸ್ವಿ ಕಂಡು ಈ ವರ್ಷ ಸಗಣಿಯಿಂದ ಗಣೇಶ ತಯಾರಿಸಿದ್ದಾರೆ. 5 ಇಂಚು ಎತ್ತರದ ಒಟ್ಟು 200 ಗಣೇಶ ಪ್ರತಿಮೆ ತಯಾರಿಸಿದ್ದು, ಇದರಲ್ಲಿ ಶೇ 90ರಷ್ಟು ಸಗಣೆ ಹಾಗೂ ಶೇ 10ರಷ್ಟು ಜಿಗಿ ಪೌಡರ್ ಹೊರತುಪಡಿಸಿದರೆ ಬೇರೆನೂ ಇಲ್ಲ. ಇದಕ್ಕಾಗಿ ಒಟ್ಟು ₹10 ರಿಂದ ₹12 ಸಾವಿರ ಖರ್ಚು ಬಂದಿದೆ.</p>.<p>‘ಈಗಾಗಲೇ ₹100 ಕ್ಕೆ ಒಂದರಂತೆ ನೂರು ಗಣೇಶ್ ಮೂರ್ತಿ ಮಾರಾಟ ಮಾಡಿದ್ದೇವೆ. 15 ದಿನಗಳಲ್ಲಿ ₹8 ರಿಂದ ₹10 ಸಾವಿರ ಬಂದರೂ ಖುಷಿ ಇದೆ. ಜನ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬಿಟ್ಟು ಇಂತಹ ಮಣ್ಣು, ಸಗಣಿಯಿಂದ ತಯಾರಿಸಿದ ಗಣೇಶ ಬಳಸಲು ಪ್ರೇರಣೆ ನೀಡುವುದು ನನ್ನ ಉದ್ದೇಶ ಎನ್ನುತ್ತಾರೆ’ ವೀರೇಶ್ ಮುದ್ದಾ.</p>.<p>‘ಆಕಳು ಸಗಣಿ, ಮಣ್ಣಿನಿಂದ ತಯಾರಿಸಿದ ಗಣಪ ಸೇರಿದಂತೆ ಯಾವುದೇ ವಸ್ತುಗಳು ನೈಸರ್ಗಿಕವಾಗಿರುವುದರಿಂದ ಬೇಗ ಕರಗುತ್ತವೆ. ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವು ಆಕಳು ಸಗಣಿಯಿಂದ ವಿಭೂತಿ, ಹಣತೆ, ದೇವರಿಗೆ ಅರ್ಪಿಸುವ ಧೂಪ ತಯಾರಿಸುತ್ತಿದ್ದೇವೆ. ನಮ್ಮ ವಿಭೂತಿಗೆ ಹೆಚ್ಚಿನ ಬೇಡಿಕೆ ಇದೆ.</p>.<p>ಕಳೆದ ವರ್ಷ ಕೂಡಲಸಂಗಮ ಹಾಗೂ ಹುಮನಾಬಾದ್ನಲ್ಲಿ 20 ಸಾವಿರ ವಿಭೂತಿ ಮಾರಾಟ ಮಾಡಿದ್ದೇವೆ. ಇನ್ನು 10 ಸಾವಿರ ಮನೆಯಲ್ಲಿ ಇವೆ. ಈ ಕೆಲಸದಲ್ಲಿ ನಮಗೆ ತುಂಬಾ ತೃಪ್ತಿ ಇದೆ. ನಮ್ಮ ಜತೆ ಇಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ’ ಎಂದು ಕಾವೇರಿ ಮುದ್ದಾ ಪರಿಸರ ಸ್ನೇಹಿ ಗಣಪ ತಯಾರಿಕೆ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ.</p>.<div><blockquote>ನನಗೆ ಆಕಳು ಪರಿಸರ ಅಂದರೆ ತುಂಬಾ ಇಷ್ಟ. ಹೆಚ್ಚು ಕಾಲ ಗೋ ಶಾಲೆಯಲ್ಲಿ ಕಳೆಯುತ್ತೇನೆ. ಹೀಗಾಗಿ ಈ ವರ್ಷ ಸಗಣಿಯಿಂದ ಗಣೇಶ ಪ್ರತಿಮೆ ತಯಾರಿಸಿದ್ದೇವೆ</blockquote><span class="attribution">ವೀರೇಶ ಮುದ್ದಾ</span></div>.<div><blockquote>ಎಲ್ಲರೂ ಪರಿಸರ ಸ್ನೇಹಿ ಗಣೇಶ ಬಳಸುವ ಮೂಲಕ ಪರಿಸರ ರಕ್ಷಣೆಗೆ ಸಹಕಾರ ನೀಡಬೇಕು. ಸರ್ಕಾರ ಕೂಡ ಇಂತಹ ಕೆಲಸಕ್ಕೆ ಉತ್ತೇಜನ ನೀಡುತ್ತಿದೆ</blockquote><span class="attribution"> ಮಹೇಶ ಪಾಟೀಲ ತಹಶೀಲ್ದಾರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ಪರಿಸರ ಜಾಗೃತಿಗಾಗಿ ಸರ್ಕಾರದ ಹತ್ತಾರು ಕಾರ್ಯಕ್ರಮಗಳ ನಡುವೆಯೂ ಇಲ್ಲಿಯ ಯುವದಂಪತಿ ಪರಿಸರ ಸ್ನೇಹಿ ಸಗಣಿ ಗಣಪ ಪ್ರತಿಮೆ ಹಾಗೂ ವಿಭೂತಿ ತಯಾರಿಸಿ ಗಮನ ಸೆಳೆದಿದ್ದಾರೆ.</p>.<p>ಎಂಜಿನಿಯರ್ ಓದಿರುವ ಪಟ್ಟಣದ ನಿವಾಸಿ ವೀರೇಶ್ ಮುದ್ದಾ, ತನ್ನ ಖಾಸಗಿ ಕೆಲಸದ ಜತೆಗೆ ಬಿಡುವಿನ ವೇಳೆಯಲ್ಲಿ ಪತ್ನಿ ಕಾವೇರಿ ಜತೆ ಪರಿಸರ ಸ್ನೇಹಿ ಕೆಲಸದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.</p>.<p>ಇಲ್ಲಿಯ ಅಮರೇಶ್ವರ ಗೋಶಾಲೆಯ ಅಭಿಯಾನಿಯೂ ಆಗಿರುವ ವೀರೇಶ್, ಕಳೆದ ಎರಡು ವರ್ಷಗಳಿಂದ ಆಕಳು ಸಗಣಿಯಿಂದ ವಿಭೂತಿ ತಯಾರಿಸಿ ಯಶಸ್ವಿ ಕಂಡು ಈ ವರ್ಷ ಸಗಣಿಯಿಂದ ಗಣೇಶ ತಯಾರಿಸಿದ್ದಾರೆ. 5 ಇಂಚು ಎತ್ತರದ ಒಟ್ಟು 200 ಗಣೇಶ ಪ್ರತಿಮೆ ತಯಾರಿಸಿದ್ದು, ಇದರಲ್ಲಿ ಶೇ 90ರಷ್ಟು ಸಗಣೆ ಹಾಗೂ ಶೇ 10ರಷ್ಟು ಜಿಗಿ ಪೌಡರ್ ಹೊರತುಪಡಿಸಿದರೆ ಬೇರೆನೂ ಇಲ್ಲ. ಇದಕ್ಕಾಗಿ ಒಟ್ಟು ₹10 ರಿಂದ ₹12 ಸಾವಿರ ಖರ್ಚು ಬಂದಿದೆ.</p>.<p>‘ಈಗಾಗಲೇ ₹100 ಕ್ಕೆ ಒಂದರಂತೆ ನೂರು ಗಣೇಶ್ ಮೂರ್ತಿ ಮಾರಾಟ ಮಾಡಿದ್ದೇವೆ. 15 ದಿನಗಳಲ್ಲಿ ₹8 ರಿಂದ ₹10 ಸಾವಿರ ಬಂದರೂ ಖುಷಿ ಇದೆ. ಜನ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬಿಟ್ಟು ಇಂತಹ ಮಣ್ಣು, ಸಗಣಿಯಿಂದ ತಯಾರಿಸಿದ ಗಣೇಶ ಬಳಸಲು ಪ್ರೇರಣೆ ನೀಡುವುದು ನನ್ನ ಉದ್ದೇಶ ಎನ್ನುತ್ತಾರೆ’ ವೀರೇಶ್ ಮುದ್ದಾ.</p>.<p>‘ಆಕಳು ಸಗಣಿ, ಮಣ್ಣಿನಿಂದ ತಯಾರಿಸಿದ ಗಣಪ ಸೇರಿದಂತೆ ಯಾವುದೇ ವಸ್ತುಗಳು ನೈಸರ್ಗಿಕವಾಗಿರುವುದರಿಂದ ಬೇಗ ಕರಗುತ್ತವೆ. ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವು ಆಕಳು ಸಗಣಿಯಿಂದ ವಿಭೂತಿ, ಹಣತೆ, ದೇವರಿಗೆ ಅರ್ಪಿಸುವ ಧೂಪ ತಯಾರಿಸುತ್ತಿದ್ದೇವೆ. ನಮ್ಮ ವಿಭೂತಿಗೆ ಹೆಚ್ಚಿನ ಬೇಡಿಕೆ ಇದೆ.</p>.<p>ಕಳೆದ ವರ್ಷ ಕೂಡಲಸಂಗಮ ಹಾಗೂ ಹುಮನಾಬಾದ್ನಲ್ಲಿ 20 ಸಾವಿರ ವಿಭೂತಿ ಮಾರಾಟ ಮಾಡಿದ್ದೇವೆ. ಇನ್ನು 10 ಸಾವಿರ ಮನೆಯಲ್ಲಿ ಇವೆ. ಈ ಕೆಲಸದಲ್ಲಿ ನಮಗೆ ತುಂಬಾ ತೃಪ್ತಿ ಇದೆ. ನಮ್ಮ ಜತೆ ಇಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ’ ಎಂದು ಕಾವೇರಿ ಮುದ್ದಾ ಪರಿಸರ ಸ್ನೇಹಿ ಗಣಪ ತಯಾರಿಕೆ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ.</p>.<div><blockquote>ನನಗೆ ಆಕಳು ಪರಿಸರ ಅಂದರೆ ತುಂಬಾ ಇಷ್ಟ. ಹೆಚ್ಚು ಕಾಲ ಗೋ ಶಾಲೆಯಲ್ಲಿ ಕಳೆಯುತ್ತೇನೆ. ಹೀಗಾಗಿ ಈ ವರ್ಷ ಸಗಣಿಯಿಂದ ಗಣೇಶ ಪ್ರತಿಮೆ ತಯಾರಿಸಿದ್ದೇವೆ</blockquote><span class="attribution">ವೀರೇಶ ಮುದ್ದಾ</span></div>.<div><blockquote>ಎಲ್ಲರೂ ಪರಿಸರ ಸ್ನೇಹಿ ಗಣೇಶ ಬಳಸುವ ಮೂಲಕ ಪರಿಸರ ರಕ್ಷಣೆಗೆ ಸಹಕಾರ ನೀಡಬೇಕು. ಸರ್ಕಾರ ಕೂಡ ಇಂತಹ ಕೆಲಸಕ್ಕೆ ಉತ್ತೇಜನ ನೀಡುತ್ತಿದೆ</blockquote><span class="attribution"> ಮಹೇಶ ಪಾಟೀಲ ತಹಶೀಲ್ದಾರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>