ಚಿತ್ರಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಪತ್ನಿ ರೇಣುಕಾ ಅವರ ನೆರವಿನೊಂದಿಗೆ ಗ್ರಾಮದಲ್ಲಿ ಲಭ್ಯವಿರುವ ಜಿಗುಟು ಮಣ್ಣು, ಸೊಲ್ಲಾಪುರ ದಿಂದ ಖರೀದಿಸಿ ತಂದ ತೆಂಗಿನ ನಾರು ಮಿಶ್ರಣ ಮಾಡಿ, ಯಾವುದೇ ರಾಸಾಯನಿಕ ಬಳಸದೇ ಪುರಾಣ ಪ್ರಸಿದ್ಧ ಗಣೇಶನ ವಿವಿಧ ಭಂಗಿಯ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕುಳಿತ ಹಾಗೂ ನಿಂತಿರುವ ವಿವಿಧ ಆಕೃತಿಯ ಗಣೇಶ ಮೂರ್ತಿಗಳನ್ನು ಈಗಾಗಲೇ ತಯಾರಿಸಿದ್ದಾರೆ.