ಬೀದರ್: ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ರಾಜಕುಮಾರ ಮೂಲಭಾರತಿ (ಅಧ್ಯಕ್ಷ), ದಶರಥ ಜಮಾದಾರ್ (ಪ್ರಧಾನ ಕಾರ್ಯದರ್ಶಿ), ಅನಿಲಕುಮಾರ ಬೆಲ್ದಾರ್ (ಸಲಹೆಗಾರ), ಸಂಜುಕುಮಾರ ಮೇಧಾ, ಸೂರ್ಯಕಾಂತ ಕೊರವ ಕಮಠಾಣ, ಸಂತೋಷ ಏಣಕೂರೆ, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ಸಂದೀಪ್ ಕಾಂಟೆ, ಶಂಕರ ಫಿರಂಗೆ, ಜೀವನ್ ಬುಡ್ತಾ, ಬಾಬುರಾವ್ ಕೌಠಾ, ಸುಬ್ಬಣ್ಣ ಕರಕನಳ್ಳಿ, ಶಿವರಾಜ ತಡಪಳ್ಳಿ, ರವಿ ಭೂಸಂಡೆ, ಧನರಾಜ ಮುಸ್ತಾಪುರೆ, ರಮೇಶ ಉಡಂನಳ್ಳಿ, ರಾಮಚಂದ್ರ ರಾಜಗೊಂಡ, ರಾಜೇಂದ್ರ ಚಿಟ್ಟಾ, ಕಾಮಶೆಟ್ಟಿ ಅಲಿಯಂಬರ್, ಸುರೇಶ ಜೋಜನಾಕರ್ (ಸಂಚಾಲಕರು).