ಈಚೆಗೆ ಸುರಿದ ಮಳೆಗೆ ದೇವಸ್ಥಾನದ ಕೆಲ ಭಾಗ ಹಾಳಾಗಿದೆ. ಗರ್ಭಗುಡಿ ಎದುರಿನ ಮಂಟಪದಲ್ಲಿ ಮಳೆ ನೀರು ಬರುತ್ತಿದೆ. ಇದರಿಂದ ಭಕ್ತರಿಗೆ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಮಹಾದ್ವಾರದ ಮೇಲೆ ಗಿಡ -ಗಂಟಿ ಬೆಳೆದು ಶಿಥಿಲಾವಸ್ಥೆಗೆ ತಲುಪಿದರೂ ಸಂಬಂಧಿಸಿದವರು ಗಮನಹರಿಸಿಲ್ಲ ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.