<p><strong>ಬಸವಕಲ್ಯಾಣ:</strong> ‘ಜನಪ್ರತಿನಿಧಿಗಳಲ್ಲಿ ಸೇವಾ ಮನೋಭಾವನೆ ಬೆಳೆದರೆ ಮಾತ್ರ ಊರು, ನಗರ ಮತ್ತು ದೇಶದ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.</p>.<p>ನಗರದ ಹೊಸಪೇಟೆ ಓಣಿಯ ವಾರ್ಡ್ ಸಂಖ್ಯೆ 7ರಲ್ಲಿ ನಗರಸಭೆ ಸದಸ್ಯ ಕುತುಬುದ್ದೀನ್ ಅದೋನಿ ಅವರಿಂದ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸನ್ಮಾನ, ಉಚಿತ ಆರೋಗ್ಯ ತಪಾಸಣೆ ಮತ್ತು ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಗರಸಭೆ ಸದಸ್ಯರು ಓಣಿ ಅಭಿವೃದ್ಧಿ ಕೈಗೊಳ್ಳುವುದರ ಜತೆಗೆ ವಿವಿಧ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ. ಜನಪರ ಕಾಳಜಿ ಇರುವವರನ್ನು ಜನ ಬೆಂಬಲಿಸಬೇಕು. ಸಂಘ ಸಂಸ್ಥೆಯವರು ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಬೇಕು’ ಎಂದರು.</p>.<p>ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ,‘ಸಸಿ ವಿತರಣೆ, ಯುವ ತಂಡಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಆಶಾ ಕಾರ್ಯಕರ್ತರಿಗೆ ಸೀರೆ ವಿತರಣೆಗೈದಿರುವ ಕುತುಬುದ್ದೀನ್ ಅವರ ಕೆಲಸ ಉತ್ತಮವಾದದ್ದು’ ಎಂದರು.<br />ಕಾಂಗ್ರೆಸ್ ಮುಖಂಡ ರೈಸೊದ್ದೀನ್, ಉಪನ್ಯಾಸಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನರಸಿಂಗರೆಡ್ಡಿ ಗದ್ಲೇಗಾಂವ್, ಜೆಡಿಎಸ್ ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ನಗರಸಭೆ ಮಾಜಿ ಅಧ್ಯಕ್ಷ ಅಜರಅಲಿ ನವರಂಗ, ಕುತುಬುದ್ದೀನ್ ಹಾಗೂ ಇಕ್ರಾಮೊದ್ದೀನ್ ಖಾದಿವಾಲೆ ಮಾತನಾಡಿದರು.</p>.<p>ನಗರಸಭೆ ಸದಸ್ಯ ಪವನ್ ಗಾಯಕವಾಡ, ರಸೀದ್ ಅದೋನಿ, ಪತ್ರಕರ್ತರ ಸಂಘದ ಅಧ್ಯಕ್ಷ ಕಲ್ಯಾಣರಾವ್ ಮದರಗಾಂವಕರ್, ಉದಯಕುಮಾರ ಮುಳೆ, ಪದೀಪ ವಿಸಾಜಿ, ಖಯಾಮೋದ್ದಿನ್, ಜುಬೇರ್ ನವಾಜಭಾಯಿ, ಸವೂದ್ ಅನ್ವರ್, ವಸೀಮ್ ಅಕ್ರಮ, ಮಹ್ಮದಮಿಯ್ಯಾ, ಜಾಕೀರ ಸೊಂಡಕೆ, ರೌಫ್ಅಲಿ ಹಾಗೂ ರಾಜಕುಮಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಜನಪ್ರತಿನಿಧಿಗಳಲ್ಲಿ ಸೇವಾ ಮನೋಭಾವನೆ ಬೆಳೆದರೆ ಮಾತ್ರ ಊರು, ನಗರ ಮತ್ತು ದೇಶದ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.</p>.<p>ನಗರದ ಹೊಸಪೇಟೆ ಓಣಿಯ ವಾರ್ಡ್ ಸಂಖ್ಯೆ 7ರಲ್ಲಿ ನಗರಸಭೆ ಸದಸ್ಯ ಕುತುಬುದ್ದೀನ್ ಅದೋನಿ ಅವರಿಂದ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸನ್ಮಾನ, ಉಚಿತ ಆರೋಗ್ಯ ತಪಾಸಣೆ ಮತ್ತು ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಗರಸಭೆ ಸದಸ್ಯರು ಓಣಿ ಅಭಿವೃದ್ಧಿ ಕೈಗೊಳ್ಳುವುದರ ಜತೆಗೆ ವಿವಿಧ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಮಾದರಿ ಕೆಲಸವಾಗಿದೆ. ಜನಪರ ಕಾಳಜಿ ಇರುವವರನ್ನು ಜನ ಬೆಂಬಲಿಸಬೇಕು. ಸಂಘ ಸಂಸ್ಥೆಯವರು ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸಬೇಕು’ ಎಂದರು.</p>.<p>ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ,‘ಸಸಿ ವಿತರಣೆ, ಯುವ ತಂಡಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಆಶಾ ಕಾರ್ಯಕರ್ತರಿಗೆ ಸೀರೆ ವಿತರಣೆಗೈದಿರುವ ಕುತುಬುದ್ದೀನ್ ಅವರ ಕೆಲಸ ಉತ್ತಮವಾದದ್ದು’ ಎಂದರು.<br />ಕಾಂಗ್ರೆಸ್ ಮುಖಂಡ ರೈಸೊದ್ದೀನ್, ಉಪನ್ಯಾಸಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನರಸಿಂಗರೆಡ್ಡಿ ಗದ್ಲೇಗಾಂವ್, ಜೆಡಿಎಸ್ ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ನಗರಸಭೆ ಮಾಜಿ ಅಧ್ಯಕ್ಷ ಅಜರಅಲಿ ನವರಂಗ, ಕುತುಬುದ್ದೀನ್ ಹಾಗೂ ಇಕ್ರಾಮೊದ್ದೀನ್ ಖಾದಿವಾಲೆ ಮಾತನಾಡಿದರು.</p>.<p>ನಗರಸಭೆ ಸದಸ್ಯ ಪವನ್ ಗಾಯಕವಾಡ, ರಸೀದ್ ಅದೋನಿ, ಪತ್ರಕರ್ತರ ಸಂಘದ ಅಧ್ಯಕ್ಷ ಕಲ್ಯಾಣರಾವ್ ಮದರಗಾಂವಕರ್, ಉದಯಕುಮಾರ ಮುಳೆ, ಪದೀಪ ವಿಸಾಜಿ, ಖಯಾಮೋದ್ದಿನ್, ಜುಬೇರ್ ನವಾಜಭಾಯಿ, ಸವೂದ್ ಅನ್ವರ್, ವಸೀಮ್ ಅಕ್ರಮ, ಮಹ್ಮದಮಿಯ್ಯಾ, ಜಾಕೀರ ಸೊಂಡಕೆ, ರೌಫ್ಅಲಿ ಹಾಗೂ ರಾಜಕುಮಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>