ಕಮಲನಗರ: ‘ಜಾನಪದ ನಮ್ಮ ಜೀವನದ ಪ್ರತಿ ದರ್ಪಣ’ ಎಂದು ಸಾವಿತ್ರಿಬಾಯಿ ಜಾಧವ ಹೇಳಿದರು.
ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪ್ರಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗೀತ, ನಾಟಕಗಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತವೆ. ಪ್ರದರ್ಶನಗಳ ಮೂಲಕ ಮಕ್ಕಳಿಗೆ ನಮ್ಮ ಭಾಗದ ಕುರಿತು ಅರಿವು ಮೂಡಿಸು ವ ಕೆಲಸ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಮನೋಜಕುಮಾರ ಬಿರಾದಾರ, ಜಗನ್ನಾಥ ಮೇತ್ರೆ, ರೇಖಾಬಾಯಿ ಕಾಂಬಳೆ, ಇಂದ್ರಾಬಾಯಿ ಕಮನಿವಾಡೆ ಹಾಗೂ ಗ್ರಾಮಸ್ಥರು ಇದ್ದರು.
ಜೈ ಭೀಮ ಗಾಯನ ಪಾರ್ಟಿ ತಂಡದ ವತಿಯಿಂದ ಪ್ರದರ್ಶನಗಳು ನಡೆದವು. ತುಕಾರಾಮ ವಾಗಮಾರೆ ತಬಲಾ, ಗಣಪತಿ ಕಾಂಬಳೆ ಹಾರ್ಮೋನಿಯಂ ನುಡಿಸಿದರು.