ಬೀದರ್: ಜಿಲ್ಲೆಯವರೇ ಆದ ಬೆಂಗಳೂರಿನ ಅಪ್ ಮೈ ರ್ಯಾಂಕ್ಸ್ ನಿರ್ದೇಶಕ ಅಬ್ದುಲ್ ಸುಭಾನ್ ಸೇಠ್ ಅವರಿಗೆ ಗ್ಲೋಬಲ್ ಬಿಸಿನೆಸ್ ಫೆಡರೇಷನ್ ವತಿಯಿಂದ ಕೊಡಲಾಗುವ ಜಾಗತಿಕ ಶ್ರೇಷ್ಠತೆ ಮತ್ತು ನಾಯಕತ್ವ ಪ್ರಶಸ್ತಿ ದೊರೆತಿದೆ.
ಶಿಕ್ಷಣ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಫೆಡರೇಷನ್ ಅಕ್ಟೋಬರ್ 22 ರಂದು ದುಬೈನ ದಿ ಹೋಟೆಲ್ ಒಬೆರಾಯ್ನಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.
ಅಬ್ದುಲ್ ಸುಭಾನ್ ಸೇಠ್ ಅವರು ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಅವರ ಪುತ್ರರಾಗಿದ್ದಾರೆ.