ಮಹಿಳಾ ಸ್ವಸಹಾಯ ಸಂಘ, ಜನ ಧನ ಖಾತೆದಾರರಿಗೆ ವಿಶೇಷ ಧನಸಹಾಯ ಪ್ರಕಟಿಸಲಾಗಿದೆ. ರೈತರ ಆದಾಯ ದುಪ್ಪಟ್ಟುಗೊಳಿಸುವ ದಿಸೆಯಲ್ಲಿ ಮೊದಲ ಹೆಜ್ಜೆಯಾಗಿ ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 60 ವರ್ಷ ಮೇಲ್ಪಟ್ಟ ಕಾರ್ಮಿಕರು, ಚಿಲ್ಲರೆ ಅಂಗಡಿ ವ್ಯಾಪಾರಿಗಳಿಗೆ ಮಾನ್ ಸಮ್ಮಾನ್, ಕರ್ಮಯೋಗಿ ಯೋಜನೆಯಡಿ ₹ 3,000 ಮಾಸಾಶನ ಘೋಷಿಸಿರುವುದು ಬಡತನ ನಿರ್ಮೂಲನೆಯ ಮಹತ್ವದ ಹೆಜ್ಜೆ. ಗ್ರಾಮ, ನಗರಗಳ ಅಭಿವೃದ್ಧಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.