ಹುಲಸೂರ ತಾಲ್ಲೂಕಿನ ಎಲ್ಲ ಪಿಡಿಒಗಳಿಗೆ ತಮ್ಮ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಬಸ್ ತಂಗುದಾಣಗಳನ್ನು ಪರಿಶೀಲಿಸಿ ದುರಸ್ತಿ ಆಗಬೇಕಿದ್ದರೆ ಸರಿಪಡಿಸಲು ಸೂಚಿಸಿ ಕ್ರಮಕೊಳ್ಳಲಾಗುವುದು
ಮಹಾದೇವ ಜಮ್ಮು ಹುಲಸೂರ ತಾ.ಪಂ ಇಒ
ತಾಲ್ಲೂಕಿನ ಬಹುತೇಕ ಗ್ರಾಮದಲ್ಲಿ ಮಿನಿ ಬಸ್ ತಂಗುದಾಣ ಇಲ್ಲದೇ ಜನರು ಮಳೆ ಬಿಸಿಲಿನ ಸಂಕಷ್ಟ ಎದುರಿಸುವಂತಾಗಿದೆ. ಅಗತ್ಯವಿರುವ ಕಡೆಗಳಲ್ಲಿ ತಂಗುದಾಣ ನಿರ್ಮಾಣ ಮಾಡಬೇಕು
ಎಂ.ಜಿ.ರಾಜೊಳೆ ತಾಲ್ಲೂಕು ಹೋರಾಟ ಸಮಿತಿ ಸಂಚಾಲಕರು
ಗಡಿಗೌಡಗಾಂವ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬಳಿಯ ಬಸ್ ತಂಗುದಾಣ ದುರಸ್ತಿಗೆ ಕಾದು ಹಲವು ವರ್ಷಗಳು ಕಳೆದಿವೆ. ಇದರ ನಿರ್ವಹಣೆಗೆ ಯಾರೂ ಸ್ಪಂದಿಸಿಲ್ಲ. ನಿತ್ಯ ರಸ್ತೆಯಲ್ಲಿ ನಿಂತು ಬಸ್ ಏರುವ ಸ್ಥಿತಿಯಿದೆ