<p><strong>ಹಾರಕೂಡ (ಬಸವಕಲ್ಯಾಣ): </strong>ತಾಲ್ಲೂಕಿನ ಹಾರಕೂಡದಲ್ಲಿ ಚಂದಾಪುರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಸೇವಾ ಸಂಘದಿಂದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರಿಗೆ ‘ಸಂಗೀತ ಸಾಹಿತ್ಯ ಪೋಷಕ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.</p>.<p>ಸಾಹಿತಿ ಬಸವರಾಜ ಐನೋಳಿ ಅವರ ‘ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠ’ ಗ್ರಂಥ ಬಿಡುಗಡೆ ಮಾಡಲಾಯಿತು.</p>.<p>ನಂತರ ಉಪನ್ಯಾಸಕ ರಾಮಚಂದ್ರ ಗಣಾಪುರ ಮಾತನಾಡಿ,‘ಹಾರಕೂಡ ಮಠದ ಶ್ರೀಗಳು ಧರ್ಮಕಾರ್ಯಗಳ ಜತೆಗೆ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಸುಂದರವಾದ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಈ ಮಠದ ಪಾತ್ರ ಬಹಳಷ್ಟಿದೆ’ ಎಂದರು.</p>.<p>ಚಿಂಚೋಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ್ ಮಾತನಾಡಿ, ‘ಈ ಭಾಗವು ಜನಪದ ಹಾಗೂ ವಚನ ಸಾಹಿತ್ಯದ ತವರುಮನೆಯಾಗಿದೆ. ರೇವಣಸಿದ್ದಯ್ಯ ಹಿರೇಮಠ ಪ್ರಖ್ಯಾತ ಸಂಗೀತ ಕಲಾವಿದರಾಗಿದ್ದು, ಅವರ ಬಗ್ಗೆ ಬಸವರಾಜ ಐನೋಳಿ ಅವರು ಗ್ರಂಥ ರಚಿಸಿರುವುದು ಸ್ತುತ್ಯಕಾರ್ಯವಾಗಿದೆ’ ಎಂದರು.</p>.<p>ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಅಶೋಕ ಪಾಟೀಲ, ಬಸವರಾಜ ಯರಬಾಗ, ಮಲ್ಲಿನಾಥ ಹಿರೇಮಠ, ರಾಜಕುಮಾರ ಶಿರಗಾಪುರ, ವಿಠಲ್ ಹೂಗಾರ ಹಾಗೂ ಅಪ್ಪಣ್ಣ ಜನವಾಡಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರಕೂಡ (ಬಸವಕಲ್ಯಾಣ): </strong>ತಾಲ್ಲೂಕಿನ ಹಾರಕೂಡದಲ್ಲಿ ಚಂದಾಪುರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಸೇವಾ ಸಂಘದಿಂದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರಿಗೆ ‘ಸಂಗೀತ ಸಾಹಿತ್ಯ ಪೋಷಕ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.</p>.<p>ಸಾಹಿತಿ ಬಸವರಾಜ ಐನೋಳಿ ಅವರ ‘ಗಾನಕೋಗಿಲೆ ರೇವಣಸಿದ್ದಯ್ಯ ಹಿರೇಮಠ’ ಗ್ರಂಥ ಬಿಡುಗಡೆ ಮಾಡಲಾಯಿತು.</p>.<p>ನಂತರ ಉಪನ್ಯಾಸಕ ರಾಮಚಂದ್ರ ಗಣಾಪುರ ಮಾತನಾಡಿ,‘ಹಾರಕೂಡ ಮಠದ ಶ್ರೀಗಳು ಧರ್ಮಕಾರ್ಯಗಳ ಜತೆಗೆ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಸುಂದರವಾದ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಈ ಮಠದ ಪಾತ್ರ ಬಹಳಷ್ಟಿದೆ’ ಎಂದರು.</p>.<p>ಚಿಂಚೋಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ್ ಮಾತನಾಡಿ, ‘ಈ ಭಾಗವು ಜನಪದ ಹಾಗೂ ವಚನ ಸಾಹಿತ್ಯದ ತವರುಮನೆಯಾಗಿದೆ. ರೇವಣಸಿದ್ದಯ್ಯ ಹಿರೇಮಠ ಪ್ರಖ್ಯಾತ ಸಂಗೀತ ಕಲಾವಿದರಾಗಿದ್ದು, ಅವರ ಬಗ್ಗೆ ಬಸವರಾಜ ಐನೋಳಿ ಅವರು ಗ್ರಂಥ ರಚಿಸಿರುವುದು ಸ್ತುತ್ಯಕಾರ್ಯವಾಗಿದೆ’ ಎಂದರು.</p>.<p>ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಅಶೋಕ ಪಾಟೀಲ, ಬಸವರಾಜ ಯರಬಾಗ, ಮಲ್ಲಿನಾಥ ಹಿರೇಮಠ, ರಾಜಕುಮಾರ ಶಿರಗಾಪುರ, ವಿಠಲ್ ಹೂಗಾರ ಹಾಗೂ ಅಪ್ಪಣ್ಣ ಜನವಾಡಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>