<p><strong>ಔರಾದ್:</strong> ತಾಲ್ಲೂಕಿನ ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಪರಿಸರದಲ್ಲಿ ಬುಧವಾರ ‘ಶ್ರೀ ಕುಮಾರ ತಪೋವನ’ಕ್ಕೆ ಚಾಲನೆ ನೀಡಲಾಯಿತು.</p>.<p>ಸಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಪರಿಸರ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ ಸಸಿ ನೆಟ್ಟು ಅದರ ಪೋಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ದಾರುಕಲಿಂಗ ಶಿವಾಚಾರ್ಯರು ಮಾತನಾಡಿ, ‘ಹೆಡಗಾಪುರ ಮಠದ ಶಿವಲಿಂಗ ಶಿವಾಚಾರ್ಯರ ಮಾರ್ಗದರ್ಶನಲ್ಲಿ ಮಠದ ಎರಡು ಎಕರೆ ಪ್ರದೇಶದಲ್ಲಿ ಶ್ರೀ ಕುಮಾರ ತಪೋವನಕ್ಕೆ ಚಾಲನೆ ನೀಡಲಾಗಿದೆ. ಅನುದಿನ ಅನುಸರಿಸು ಸಂಸ್ಥೆ ಆಶ್ರಯದಲ್ಲಿ ಊರಿಗೊಂದು ವನ ಯೋಜನೆಯ ಭಾಗವಾಗಿ ಈ ತಪೋವನ ಆರಂಭಿಸಲಾಗಿದೆ’ ಎಂದರು.</p>.<p>‘ಪರಿಸರ ಮಾಲಿನ್ಯ ದೇಶಕ್ಕೆ ದೊಡ್ಡ ಸಮಸ್ಯೆ. ಇದರಿಂದ ಮಾನವ ಸೇರಿದಂತೆ ಎಲ್ಲ ಜೀವಿಗಳು ಪರಿಣಾಮ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಊರಿಗೊಂದು ವನ ಅಭಿಯಾನ ನಡೆಸುತ್ತಿದ್ದೇವೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.</p>.<p>ಹೆಡಗಾಪುರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು, ಬೊಮ್ಮಲಿಂಗ ಸ್ವಾಮೀಜಿ, ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ, ಶ್ರೀಮಂತ ಪಾಟೀಲ, ಹಣಮಂತ ಯರನಾಳೆ, ಶಿವಲಿಂಗ ಚಿಟ್ಟಾ, ಮಲ್ಲಪ್ಪ ರಾಮಶೆಟ್ಟಿ, ಕಾಶಿನಾಥ, ಆಕಾಶ, ಪ್ರಶಾಂತ ಬೆಳಕುಣೆ, ಶಂಕ್ರಯ್ಯ ಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ತಾಲ್ಲೂಕಿನ ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಪರಿಸರದಲ್ಲಿ ಬುಧವಾರ ‘ಶ್ರೀ ಕುಮಾರ ತಪೋವನ’ಕ್ಕೆ ಚಾಲನೆ ನೀಡಲಾಯಿತು.</p>.<p>ಸಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಪರಿಸರ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿ ಸಸಿ ನೆಟ್ಟು ಅದರ ಪೋಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ದಾರುಕಲಿಂಗ ಶಿವಾಚಾರ್ಯರು ಮಾತನಾಡಿ, ‘ಹೆಡಗಾಪುರ ಮಠದ ಶಿವಲಿಂಗ ಶಿವಾಚಾರ್ಯರ ಮಾರ್ಗದರ್ಶನಲ್ಲಿ ಮಠದ ಎರಡು ಎಕರೆ ಪ್ರದೇಶದಲ್ಲಿ ಶ್ರೀ ಕುಮಾರ ತಪೋವನಕ್ಕೆ ಚಾಲನೆ ನೀಡಲಾಗಿದೆ. ಅನುದಿನ ಅನುಸರಿಸು ಸಂಸ್ಥೆ ಆಶ್ರಯದಲ್ಲಿ ಊರಿಗೊಂದು ವನ ಯೋಜನೆಯ ಭಾಗವಾಗಿ ಈ ತಪೋವನ ಆರಂಭಿಸಲಾಗಿದೆ’ ಎಂದರು.</p>.<p>‘ಪರಿಸರ ಮಾಲಿನ್ಯ ದೇಶಕ್ಕೆ ದೊಡ್ಡ ಸಮಸ್ಯೆ. ಇದರಿಂದ ಮಾನವ ಸೇರಿದಂತೆ ಎಲ್ಲ ಜೀವಿಗಳು ಪರಿಣಾಮ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಊರಿಗೊಂದು ವನ ಅಭಿಯಾನ ನಡೆಸುತ್ತಿದ್ದೇವೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.</p>.<p>ಹೆಡಗಾಪುರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು, ಬೊಮ್ಮಲಿಂಗ ಸ್ವಾಮೀಜಿ, ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ, ಶ್ರೀಮಂತ ಪಾಟೀಲ, ಹಣಮಂತ ಯರನಾಳೆ, ಶಿವಲಿಂಗ ಚಿಟ್ಟಾ, ಮಲ್ಲಪ್ಪ ರಾಮಶೆಟ್ಟಿ, ಕಾಶಿನಾಥ, ಆಕಾಶ, ಪ್ರಶಾಂತ ಬೆಳಕುಣೆ, ಶಂಕ್ರಯ್ಯ ಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>