<p><strong>ಬಸವಕಲ್ಯಾಣ: </strong>ತಾಲ್ಲೂಕಿನ ಪ್ರತಾಪುರದ ರತನ ಪಂಚಾಳ (62) ಇವರು ಕೋವಿಡ್ನಿಂದ ಸಾವನ್ನಪ್ಪದಿದ್ದರೂ ಅಂತ್ಯಕ್ರಿಯೆಗೆ ಊರ ಜನ ಬಾರದ ಕಾರಣ ಕೆಲ ಮುಸ್ಲಿಂ ಯುವಕರು ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.</p>.<p>ರತನ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಕೋವಿಡ್ ತಪಾಸಣೆ ಮಾಡಿರಲಿಲ್ಲ. ಅಂಥ ಲಕ್ಷಣಗಳು ಕೂಡ ಇದ್ದಿರಲಿಲ್ಲ. ಆದರೂ, ಸಂಶಯಪಟ್ಟು ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದಾಗಲಿಲ್ಲ ಎನ್ನಲಾಗುತ್ತಿದೆ.</p>.<p>ಈ ವಿಷಯವನ್ನು ಸಮೀಪದಲ್ಲಿಯೇ ಇರುವ ಬಸವಕಲ್ಯಾಣ ನಗರದ ರಾಜಾ ಬಾಗಸವಾರ ದರ್ಗಾ ಹತ್ತಿರದಲ್ಲಿದ್ದ ಮುಸ್ಲಿಂ ಯುವಕರಿಗೆ ತಿಳಿಸಿದಾಗ ಮಾಸ್ಕ್ ಹಾಗೂ ಹ್ಯಾಂಡ್ಗ್ಲೌಸ್ ಹಾಕಿಕೊಂಡು ಬಂದು ಶವವನ್ನು ಸುಡುವುದಕ್ಕೆ ನೆರವಾಗಿದ್ದಾರೆ. ಕೋಮುಸೌಹಾರ್ದತೆ ಮೆರೆದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.</p>.<p>‘ಮೃತರು ಬಡವರಾಗಿದ್ದರಿಂದ ಶವಸಂಸ್ಕಾರಕ್ಕೂ ಹಣವಿರಲಿಲ್ಲ. ಆದ್ದರಿಂದ ನಾನು ಕೆಲವರ ಜತೆ ಊರಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಿದೆ. ಅಂತ್ಯಕ್ರಿಯೆಗೆ ಯಾರೂ ಬರುತ್ತಿಲ್ಲ ಎಂಬುದನ್ನು ಬಸವಕಲ್ಯಾಣದ ಮುಸ್ಲಿಂ ಯುವಕರಿಗೆ ತಿಳಿಸಿದಾಗ ಅವರು ಬಂದು ಈ ಕಾರ್ಯದಲ್ಲಿ ಕೈಜೋಡಿಸಿದರು. ಅಂತ್ಯಕ್ರಿಯೆಗೆ ಬೇಕಾದ ಕಟ್ಟಿಗೆ ಇತ್ಯಾದಿ ಖರೀದಿಸಿ ಎಲ್ಲವನ್ನೂ ವ್ಯವಸ್ಥಿತವಾಗಿ ನೆರವೇರಿಸಲಾಯಿತು’ ಎಂದು ಅದೇ ಊರಿನವರಾದ ಎಬಿವಿಪಿ ಜಿಲ್ಲಾ ಮುಖಂಡ ಲೋಕೇಶ ಮೋಳಕೆರೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>ತಾಲ್ಲೂಕಿನ ಪ್ರತಾಪುರದ ರತನ ಪಂಚಾಳ (62) ಇವರು ಕೋವಿಡ್ನಿಂದ ಸಾವನ್ನಪ್ಪದಿದ್ದರೂ ಅಂತ್ಯಕ್ರಿಯೆಗೆ ಊರ ಜನ ಬಾರದ ಕಾರಣ ಕೆಲ ಮುಸ್ಲಿಂ ಯುವಕರು ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.</p>.<p>ರತನ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಕೋವಿಡ್ ತಪಾಸಣೆ ಮಾಡಿರಲಿಲ್ಲ. ಅಂಥ ಲಕ್ಷಣಗಳು ಕೂಡ ಇದ್ದಿರಲಿಲ್ಲ. ಆದರೂ, ಸಂಶಯಪಟ್ಟು ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದಾಗಲಿಲ್ಲ ಎನ್ನಲಾಗುತ್ತಿದೆ.</p>.<p>ಈ ವಿಷಯವನ್ನು ಸಮೀಪದಲ್ಲಿಯೇ ಇರುವ ಬಸವಕಲ್ಯಾಣ ನಗರದ ರಾಜಾ ಬಾಗಸವಾರ ದರ್ಗಾ ಹತ್ತಿರದಲ್ಲಿದ್ದ ಮುಸ್ಲಿಂ ಯುವಕರಿಗೆ ತಿಳಿಸಿದಾಗ ಮಾಸ್ಕ್ ಹಾಗೂ ಹ್ಯಾಂಡ್ಗ್ಲೌಸ್ ಹಾಕಿಕೊಂಡು ಬಂದು ಶವವನ್ನು ಸುಡುವುದಕ್ಕೆ ನೆರವಾಗಿದ್ದಾರೆ. ಕೋಮುಸೌಹಾರ್ದತೆ ಮೆರೆದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.</p>.<p>‘ಮೃತರು ಬಡವರಾಗಿದ್ದರಿಂದ ಶವಸಂಸ್ಕಾರಕ್ಕೂ ಹಣವಿರಲಿಲ್ಲ. ಆದ್ದರಿಂದ ನಾನು ಕೆಲವರ ಜತೆ ಊರಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಿದೆ. ಅಂತ್ಯಕ್ರಿಯೆಗೆ ಯಾರೂ ಬರುತ್ತಿಲ್ಲ ಎಂಬುದನ್ನು ಬಸವಕಲ್ಯಾಣದ ಮುಸ್ಲಿಂ ಯುವಕರಿಗೆ ತಿಳಿಸಿದಾಗ ಅವರು ಬಂದು ಈ ಕಾರ್ಯದಲ್ಲಿ ಕೈಜೋಡಿಸಿದರು. ಅಂತ್ಯಕ್ರಿಯೆಗೆ ಬೇಕಾದ ಕಟ್ಟಿಗೆ ಇತ್ಯಾದಿ ಖರೀದಿಸಿ ಎಲ್ಲವನ್ನೂ ವ್ಯವಸ್ಥಿತವಾಗಿ ನೆರವೇರಿಸಲಾಯಿತು’ ಎಂದು ಅದೇ ಊರಿನವರಾದ ಎಬಿವಿಪಿ ಜಿಲ್ಲಾ ಮುಖಂಡ ಲೋಕೇಶ ಮೋಳಕೆರೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>