<p>ಹುಲಸೂರ: ‘ಪತ್ರಿಕೆ ಓದುವುದರಿಂದ ಜ್ಞಾನ ಸಂಪಾದನೆಯಾಗುತ್ತದೆ. ಎಸ್ಎಸ್ಎಸ್ಸಿ ಪರೀಕ್ಷೆಗೆ ಸಹಾಯಕವಾಗುವ ಸಂಗತಿಗಳನ್ನು ‘ಪ್ರಜಾವಾಣಿ’ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವುದು ಸಂತೋಷದ ವಿಷಯ’ ಎಂದು ಮುಚಳoಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋನಿಯಾ ಸಿದ್ದಾರೂಢ ಹೇಳಿದರು.</p>.<p>ಮುಚಳoಬ ಗ್ರಾಮ ಪಂಚಾಯಿತಿ ವತಿಯಿಂದ ಎಸ್ಏಸ್ಎಲ್ಸಿ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ ಎಸ್ಎಸ್ಎಲ್ಸಿ ಮಾರ್ಗದರ್ಶಿ’ ವಿತರಿಸಿ ಅವರು ಮಾತನಾಡಿದರು.</p>.<p>‘ವಸ್ತುನಿಷ್ಠ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪತ್ರಿಕೆ ನೀಡುತ್ತಿದೆ. ಶಾಲೆಯಲ್ಲಿ ಪಾಠ ಕೇಳಿದ ನಂತರ ಪತ್ರಿಕೆಯಲ್ಲಿ ಪ್ರಕಟವಾಗುವ ಅದೇ ವಿಷಯದ ಪಾಠವನ್ನು ಮತ್ತೊಮ್ಮೆ ಓದಿದರೇ ಹೆಚ್ಚು ಅರ್ಥವಾಗುತ್ತದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಗಳಿಸಬಹುದು’ ಎಂದರು.</p>.<p>ಪಿಡಿಒ ಸಂದೀಪ ಮಾತನಾಡಿ, ‘ಪಂಚಾಯಿತಿ ವತಿಯಿಂದ ಪತ್ರಿಕೆಗಳನ್ನು ಉಚಿತವಾಗಿ ಶಾಲೆಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು’ ಎಂದರು.</p>.<p>ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ ಪಾಟಿಲ ಮಾತನಾಡಿದರು.</p>.<p>ಜಿಲ್ಲಾ ಪತ್ರಿಕಾ ವಿತರಕ ಮುಖಂಡ ಉಮಾಕಾಂತ ಡಕಾಲಿ ಮಾತನಾಡಿ, ‘ತಾ.ಪಂ ಇಒ ಮಹದೇವ ಬಾಬಳಗಿ, ಮುಚಳoಬ, ಬೇಲೂರ, ಗೋರಟಾ, ತೊಗಲುರ, ಮೀರಖಲ, ಹುಲಸೂರ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಅವರ ಶೈಕ್ಷಣಿಕ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಮಾರ್ಗದರ್ಶಿ ಲಭ್ಯವಾಗುತ್ತಿದೆ’ ಎಂದರು.</p>.<p>ಈ ವೇಳೆ ಮುಖ್ಯಶಿಕ್ಷಕ ರವಿ ಬಿರಾದಾರ, ವಿಜಯಕುಮಾರ ಪಟ್ನೇ, ಅನೋಜಕುಮಾರ, ಮಿಲ್ಲಿಕ್ ಸಾಬ್, ಬಸವರಾಜ ಜೀರೋಬೆ, ಶಿವಶಂಕರ ಪತಂಗೆ, ಬೇಬಿ ಬಿರಾದಾರ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಲಸೂರ: ‘ಪತ್ರಿಕೆ ಓದುವುದರಿಂದ ಜ್ಞಾನ ಸಂಪಾದನೆಯಾಗುತ್ತದೆ. ಎಸ್ಎಸ್ಎಸ್ಸಿ ಪರೀಕ್ಷೆಗೆ ಸಹಾಯಕವಾಗುವ ಸಂಗತಿಗಳನ್ನು ‘ಪ್ರಜಾವಾಣಿ’ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವುದು ಸಂತೋಷದ ವಿಷಯ’ ಎಂದು ಮುಚಳoಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋನಿಯಾ ಸಿದ್ದಾರೂಢ ಹೇಳಿದರು.</p>.<p>ಮುಚಳoಬ ಗ್ರಾಮ ಪಂಚಾಯಿತಿ ವತಿಯಿಂದ ಎಸ್ಏಸ್ಎಲ್ಸಿ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ ಎಸ್ಎಸ್ಎಲ್ಸಿ ಮಾರ್ಗದರ್ಶಿ’ ವಿತರಿಸಿ ಅವರು ಮಾತನಾಡಿದರು.</p>.<p>‘ವಸ್ತುನಿಷ್ಠ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪತ್ರಿಕೆ ನೀಡುತ್ತಿದೆ. ಶಾಲೆಯಲ್ಲಿ ಪಾಠ ಕೇಳಿದ ನಂತರ ಪತ್ರಿಕೆಯಲ್ಲಿ ಪ್ರಕಟವಾಗುವ ಅದೇ ವಿಷಯದ ಪಾಠವನ್ನು ಮತ್ತೊಮ್ಮೆ ಓದಿದರೇ ಹೆಚ್ಚು ಅರ್ಥವಾಗುತ್ತದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಗಳಿಸಬಹುದು’ ಎಂದರು.</p>.<p>ಪಿಡಿಒ ಸಂದೀಪ ಮಾತನಾಡಿ, ‘ಪಂಚಾಯಿತಿ ವತಿಯಿಂದ ಪತ್ರಿಕೆಗಳನ್ನು ಉಚಿತವಾಗಿ ಶಾಲೆಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು’ ಎಂದರು.</p>.<p>ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ ಪಾಟಿಲ ಮಾತನಾಡಿದರು.</p>.<p>ಜಿಲ್ಲಾ ಪತ್ರಿಕಾ ವಿತರಕ ಮುಖಂಡ ಉಮಾಕಾಂತ ಡಕಾಲಿ ಮಾತನಾಡಿ, ‘ತಾ.ಪಂ ಇಒ ಮಹದೇವ ಬಾಬಳಗಿ, ಮುಚಳoಬ, ಬೇಲೂರ, ಗೋರಟಾ, ತೊಗಲುರ, ಮೀರಖಲ, ಹುಲಸೂರ ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ಅವರ ಶೈಕ್ಷಣಿಕ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಮಾರ್ಗದರ್ಶಿ ಲಭ್ಯವಾಗುತ್ತಿದೆ’ ಎಂದರು.</p>.<p>ಈ ವೇಳೆ ಮುಖ್ಯಶಿಕ್ಷಕ ರವಿ ಬಿರಾದಾರ, ವಿಜಯಕುಮಾರ ಪಟ್ನೇ, ಅನೋಜಕುಮಾರ, ಮಿಲ್ಲಿಕ್ ಸಾಬ್, ಬಸವರಾಜ ಜೀರೋಬೆ, ಶಿವಶಂಕರ ಪತಂಗೆ, ಬೇಬಿ ಬಿರಾದಾರ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>