<p><strong>ಹುಲಸೂರ:</strong> ದೇವರು ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ. ಪರಮಾತ್ಮನನ್ನು ಅರಿಯಬೇಕಾದರೆ ಮಾನವನ ಮನಸ್ಸು ನಿರ್ಮಲವಾಗಿರಬೇಕು. ತಿಳಿಯಾದ ನೀರಿನಲ್ಲಿ ಮುಖ ಪ್ರತಿಬಿಂಬಿಸುವಂತೆ, ಶುದ್ಧ ಮನಸ್ಸಿನಲ್ಲಿ ಮಾತ್ರ ದೇವಭಾವ ನೆಲೆಸುತ್ತದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಗೋರಟಾ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.</p>.<p>‘ಮಾನವನ ನಿಜವಾದ ಶೃಂಗಾರ ಭೌತಿಕ ಆಭರಣಗಳಲ್ಲಿಲ್ಲ, ಅದು ಶರಣರ ಸಂಗದಲ್ಲಿದೆ. ಕಣ್ಣುಗಳಿಂದ ಗುರು–ಹಿರಿಯರನ್ನು ನೋಡುವುದು, ಕಿವಿಗಳಿಂದ ಶರಣರ ಅನುಭವದ ವಚನಗಳನ್ನು ಕೇಳುವುದು, ಕೈಗಳಿಂದ ಸತ್ಪಾತ್ರಕ್ಕೆ ದಾಸೋಹ ಮಾಡುವುದು, ಕಾಲುಗಳಿಂದ ಸತ್ಯದ ದಾರಿಯಲ್ಲಿ ನಡೆಯುವುದೇ ಜೀವನದ ನಿಜವಾದ ಶೃಂಗಾರ’ ಎಂದರು.</p>.<p>ಪರುಷಕಟ್ಟೆ ಚನ್ನಬಸವಣ್ಣ ಮಾತನಾಡಿ, ‘ಜೀವನ ಪಾವನವಾಗಬೇಕಾದರೆ ಮನಸ್ಸು ಹೇಳಿದಂತೆ ನಾವು ನಡೆಯಬಾರದು, ನಾವು ಹೇಳಿದಂತೆ ಮನಸ್ಸು ನಡೆಯಬೇಕು. ಹೊಗಳಿಕೆಗೆ ಮನಸ್ಸು ಹಿಗ್ಗಿ ಅಹಂಕಾರ ಹೆಚ್ಚುತ್ತದೆ. ಸತ್ಯವನ್ನು ವಿರೋಧಿಸುವ ಸ್ವಭಾವವೇ ಮನಸ್ಸಿನ ದೌರ್ಬಲ್ಯವಾಗಿದ್ದು, ಅದನ್ನು ನಿಯಂತ್ರಿಸಿದಾಗ ಮಾತ್ರ ಆತ್ಮೋನ್ನತಿ ಸಾಧ್ಯ’ ಎಂದರು.</p>.<p>ಓಂಕಾರ ಬಿರಾದಾರ ಉದ್ಘಾಟಿಸಿದರು. ಜೈಕುಮಾರ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಧನ್ನುರಾ (ಕೆ) ಗ್ರಾಮದ ನೀಲಮ್ಮನ ಬಳಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರಣೆ ಸಂಗೀತಾ ಶಿಖರೇಶ್ವರ ಬಿರಾದಾರ ಹಾಗೂ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಶರಣ ರಾಜಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ರಾಜೋಳೆ, ಗಂಗಮ್ಮ ಚಂದ್ರಶೇಖರ ಜಗಶೆಟ್ಟೆ, ನೀಲಾವತಿ ದತ್ತಾತ್ರಿ ಜಗಶೆಟ್ಟಿ ,ಗೋದಾವರಿ ರಾಜೋಳೆ, ಬಾಬುರಾವ ರಾಜೋಳೆ, ಚಂದ್ರಕಾಂತ ಕಣಜೆ, ಸುಭಾಶ ಪತಂಗೆ, ಶಿವರಾಜ ಕನಕಟ್ಟೆ, ಶ್ರೀಮಂತಪ್ಪ ರಾಜೇಶ್ವರೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ದೇವರು ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ. ಪರಮಾತ್ಮನನ್ನು ಅರಿಯಬೇಕಾದರೆ ಮಾನವನ ಮನಸ್ಸು ನಿರ್ಮಲವಾಗಿರಬೇಕು. ತಿಳಿಯಾದ ನೀರಿನಲ್ಲಿ ಮುಖ ಪ್ರತಿಬಿಂಬಿಸುವಂತೆ, ಶುದ್ಧ ಮನಸ್ಸಿನಲ್ಲಿ ಮಾತ್ರ ದೇವಭಾವ ನೆಲೆಸುತ್ತದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಗೋರಟಾ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.</p>.<p>‘ಮಾನವನ ನಿಜವಾದ ಶೃಂಗಾರ ಭೌತಿಕ ಆಭರಣಗಳಲ್ಲಿಲ್ಲ, ಅದು ಶರಣರ ಸಂಗದಲ್ಲಿದೆ. ಕಣ್ಣುಗಳಿಂದ ಗುರು–ಹಿರಿಯರನ್ನು ನೋಡುವುದು, ಕಿವಿಗಳಿಂದ ಶರಣರ ಅನುಭವದ ವಚನಗಳನ್ನು ಕೇಳುವುದು, ಕೈಗಳಿಂದ ಸತ್ಪಾತ್ರಕ್ಕೆ ದಾಸೋಹ ಮಾಡುವುದು, ಕಾಲುಗಳಿಂದ ಸತ್ಯದ ದಾರಿಯಲ್ಲಿ ನಡೆಯುವುದೇ ಜೀವನದ ನಿಜವಾದ ಶೃಂಗಾರ’ ಎಂದರು.</p>.<p>ಪರುಷಕಟ್ಟೆ ಚನ್ನಬಸವಣ್ಣ ಮಾತನಾಡಿ, ‘ಜೀವನ ಪಾವನವಾಗಬೇಕಾದರೆ ಮನಸ್ಸು ಹೇಳಿದಂತೆ ನಾವು ನಡೆಯಬಾರದು, ನಾವು ಹೇಳಿದಂತೆ ಮನಸ್ಸು ನಡೆಯಬೇಕು. ಹೊಗಳಿಕೆಗೆ ಮನಸ್ಸು ಹಿಗ್ಗಿ ಅಹಂಕಾರ ಹೆಚ್ಚುತ್ತದೆ. ಸತ್ಯವನ್ನು ವಿರೋಧಿಸುವ ಸ್ವಭಾವವೇ ಮನಸ್ಸಿನ ದೌರ್ಬಲ್ಯವಾಗಿದ್ದು, ಅದನ್ನು ನಿಯಂತ್ರಿಸಿದಾಗ ಮಾತ್ರ ಆತ್ಮೋನ್ನತಿ ಸಾಧ್ಯ’ ಎಂದರು.</p>.<p>ಓಂಕಾರ ಬಿರಾದಾರ ಉದ್ಘಾಟಿಸಿದರು. ಜೈಕುಮಾರ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಧನ್ನುರಾ (ಕೆ) ಗ್ರಾಮದ ನೀಲಮ್ಮನ ಬಳಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರಣೆ ಸಂಗೀತಾ ಶಿಖರೇಶ್ವರ ಬಿರಾದಾರ ಹಾಗೂ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು.</p>.<p>ಶರಣ ರಾಜಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ರಾಜೋಳೆ, ಗಂಗಮ್ಮ ಚಂದ್ರಶೇಖರ ಜಗಶೆಟ್ಟೆ, ನೀಲಾವತಿ ದತ್ತಾತ್ರಿ ಜಗಶೆಟ್ಟಿ ,ಗೋದಾವರಿ ರಾಜೋಳೆ, ಬಾಬುರಾವ ರಾಜೋಳೆ, ಚಂದ್ರಕಾಂತ ಕಣಜೆ, ಸುಭಾಶ ಪತಂಗೆ, ಶಿವರಾಜ ಕನಕಟ್ಟೆ, ಶ್ರೀಮಂತಪ್ಪ ರಾಜೇಶ್ವರೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>