ಬಸವಕಲ್ಯಾಣ: ಮರಾಠಿ ಕವಿ, ಲೇಖಕರ ಸಂಘಟನೆಯ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಬುಧವಾರ ಇಲ್ಲಿ ಆಯೋಜಿಸಲಾಗಿತ್ತು.
ಹಿರಿಯ ಕವಿ ಅನಂತ ಕದಮ ಹೊಳಸಮುದ್ರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಸಾಹಿತ್ಯದಿಂದ ಸಮಾಜ ಜಾಗೃತಿ ಸಾಧ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದುವಂಥ ಕಾವ್ಯವನ್ನು ಉದಯೋನ್ಮುಖರು ರಚಿಸಬೇಕು’ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಮಾತನಾಡಿ, ‘ಸಾಹಿತ್ಯಾಸಕ್ತಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಸಂಘಟನೆ ಆರಂಭಿಸಲಾಗುತ್ತಿದೆ’ ಎಂದರು.