<p><strong>ಬಸವಕಲ್ಯಾಣ</strong>: ಮರಾಠಿ ಕವಿ, ಲೇಖಕರ ಸಂಘಟನೆಯ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಬುಧವಾರ ಇಲ್ಲಿ ಆಯೋಜಿಸಲಾಗಿತ್ತು.</p>.<p>ಹಿರಿಯ ಕವಿ ಅನಂತ ಕದಮ ಹೊಳಸಮುದ್ರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಸಾಹಿತ್ಯದಿಂದ ಸಮಾಜ ಜಾಗೃತಿ ಸಾಧ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದುವಂಥ ಕಾವ್ಯವನ್ನು ಉದಯೋನ್ಮುಖರು ರಚಿಸಬೇಕು’ ಎಂದರು.</p>.<p>ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಮಾತನಾಡಿ, ‘ಸಾಹಿತ್ಯಾಸಕ್ತಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಸಂಘಟನೆ ಆರಂಭಿಸಲಾಗುತ್ತಿದೆ’ ಎಂದರು.</p>.<p>ಮೋಹನ ಕೋರೆ, ಗೋವಿಂದರಾವ್ ಚಿಟ್ಟಮಪಲ್ಲೆ, ಉದ್ಧವರಾವ್ ಹಲಸೆ, ಭಾವುರಾವ್ ಪಾಟೀಲ ಘಾಟಬೋರಾಳ, ಅನಿತಾ ಸಾವಳಕರ್, ಗಂಗಾರಾಮ ಜೋಗೆವಾಡಿ, ಅಷ್ಟಮಿ ಕಾಂಬಳೆ, ಶೀಲಾ ಪಾಟೀಲ ಮಾತನಾಡಿದರು.</p>.<p>15 ಜನರು ಕವನ ವಾಚಿಸಿದರು. ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಭಾನುದಾಸ ಪಾಟೀಲ ಅವರು ಶಿಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಕಾರಣ ಅವರನ್ನು ಸನ್ಮಾನಿಸಲಾಯಿತು.</p>.<p>ಜಿಲ್ಲಾ ಘಟಕದ ಖಜಾಂಚಿ ಅಮೃತ ಆಕರೆ, ಲಕ್ಷ್ಮಿಬಾಯಿ ಪಾಟೀಲ, ದಮಯಂತಿ ಮೈಸೆ ಉಪಸ್ಥಿತರಿದ್ದರು. ಬಾಲಾಜಿ ಜಾಧವ ನಿರೂಪಿಸಿದರು. ಬಜರಂಗ ಕಾಂಬಳೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ಮರಾಠಿ ಕವಿ, ಲೇಖಕರ ಸಂಘಟನೆಯ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಬುಧವಾರ ಇಲ್ಲಿ ಆಯೋಜಿಸಲಾಗಿತ್ತು.</p>.<p>ಹಿರಿಯ ಕವಿ ಅನಂತ ಕದಮ ಹೊಳಸಮುದ್ರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಸಾಹಿತ್ಯದಿಂದ ಸಮಾಜ ಜಾಗೃತಿ ಸಾಧ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದುವಂಥ ಕಾವ್ಯವನ್ನು ಉದಯೋನ್ಮುಖರು ರಚಿಸಬೇಕು’ ಎಂದರು.</p>.<p>ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಮಾತನಾಡಿ, ‘ಸಾಹಿತ್ಯಾಸಕ್ತಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಸಂಘಟನೆ ಆರಂಭಿಸಲಾಗುತ್ತಿದೆ’ ಎಂದರು.</p>.<p>ಮೋಹನ ಕೋರೆ, ಗೋವಿಂದರಾವ್ ಚಿಟ್ಟಮಪಲ್ಲೆ, ಉದ್ಧವರಾವ್ ಹಲಸೆ, ಭಾವುರಾವ್ ಪಾಟೀಲ ಘಾಟಬೋರಾಳ, ಅನಿತಾ ಸಾವಳಕರ್, ಗಂಗಾರಾಮ ಜೋಗೆವಾಡಿ, ಅಷ್ಟಮಿ ಕಾಂಬಳೆ, ಶೀಲಾ ಪಾಟೀಲ ಮಾತನಾಡಿದರು.</p>.<p>15 ಜನರು ಕವನ ವಾಚಿಸಿದರು. ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಭಾನುದಾಸ ಪಾಟೀಲ ಅವರು ಶಿಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಕಾರಣ ಅವರನ್ನು ಸನ್ಮಾನಿಸಲಾಯಿತು.</p>.<p>ಜಿಲ್ಲಾ ಘಟಕದ ಖಜಾಂಚಿ ಅಮೃತ ಆಕರೆ, ಲಕ್ಷ್ಮಿಬಾಯಿ ಪಾಟೀಲ, ದಮಯಂತಿ ಮೈಸೆ ಉಪಸ್ಥಿತರಿದ್ದರು. ಬಾಲಾಜಿ ಜಾಧವ ನಿರೂಪಿಸಿದರು. ಬಜರಂಗ ಕಾಂಬಳೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>