ಮರಾಠಿ ಕವಿ, ಲೇಖಕರ ಸಂಘ ಉದ್ಘಾಟನೆ

ಬಸವಕಲ್ಯಾಣ: ಮರಾಠಿ ಕವಿ, ಲೇಖಕರ ಸಂಘಟನೆಯ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಬುಧವಾರ ಇಲ್ಲಿ ಆಯೋಜಿಸಲಾಗಿತ್ತು.
ಹಿರಿಯ ಕವಿ ಅನಂತ ಕದಮ ಹೊಳಸಮುದ್ರ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಸಾಹಿತ್ಯದಿಂದ ಸಮಾಜ ಜಾಗೃತಿ ಸಾಧ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದುವಂಥ ಕಾವ್ಯವನ್ನು ಉದಯೋನ್ಮುಖರು ರಚಿಸಬೇಕು’ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಮಾತನಾಡಿ, ‘ಸಾಹಿತ್ಯಾಸಕ್ತಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಸಂಘಟನೆ ಆರಂಭಿಸಲಾಗುತ್ತಿದೆ’ ಎಂದರು.
ಮೋಹನ ಕೋರೆ, ಗೋವಿಂದರಾವ್ ಚಿಟ್ಟಮಪಲ್ಲೆ, ಉದ್ಧವರಾವ್ ಹಲಸೆ, ಭಾವುರಾವ್ ಪಾಟೀಲ ಘಾಟಬೋರಾಳ, ಅನಿತಾ ಸಾವಳಕರ್, ಗಂಗಾರಾಮ ಜೋಗೆವಾಡಿ, ಅಷ್ಟಮಿ ಕಾಂಬಳೆ, ಶೀಲಾ ಪಾಟೀಲ ಮಾತನಾಡಿದರು.
15 ಜನರು ಕವನ ವಾಚಿಸಿದರು. ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಭಾನುದಾಸ ಪಾಟೀಲ ಅವರು ಶಿಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದ ಕಾರಣ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಘಟಕದ ಖಜಾಂಚಿ ಅಮೃತ ಆಕರೆ, ಲಕ್ಷ್ಮಿಬಾಯಿ ಪಾಟೀಲ, ದಮಯಂತಿ ಮೈಸೆ ಉಪಸ್ಥಿತರಿದ್ದರು. ಬಾಲಾಜಿ ಜಾಧವ ನಿರೂಪಿಸಿದರು. ಬಜರಂಗ ಕಾಂಬಳೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.