<p>ಔರಾದ್: ರೈತರಾಗಿರುವ ರಾಜಕುಮಾರ ನಾಯ್ಕ ಅವರು ಜನರಿಗೆ ಯೋಗ ಕಲಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಕರಂಜಿ (ಕೆ) ಗ್ರಾಮದ ರಾಜಕುಮಾರ ಅವರು ಬಾಲ್ಯದಿಂದಲೂ ಯೋಗದ ಬಗ್ಗೆ ತುಂಬಾ ಆಸಕ್ತಿ ಇಟ್ಟುಕೊಂಡವರು. ಹರಿದ್ವಾರಕ್ಕೆ ಹೋಗಿ ಮೂರು ತಿಂಗಳು ಯೋಗ ಹಾಗೂ ಅಧಾತ್ಮಕ ಜ್ಞಾನ ಪಡೆದುಕೊಂಡು ಬಂದ ನಂತರ ಜನರಿಗೆ ಯೋಗ ಕಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>‘ನಮ್ಮದು ರೋಗ ಮುಕ್ತ ಸಮಾಜ ಆಗಬೇಕು. ಕಳೆದ 10 ವರ್ಷಗಳಿಂದ ಯೋಗ ತರಬೇತಿ ಕೊಡುತ್ತಿದ್ದೇನೆ. ಇಲ್ಲಿಯ ತನಕ 200 ತಾಂಡಾಗಳಲ್ಲಿ ಯೋಗ ಶಿಬಿರ ನಡೆಸಿದ್ದೇನೆ. 100ಕ್ಕೂ ಹೆಚ್ಚು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಿದ್ದೇನೆ. ಬಾಗಲಕೋಟೆ ಜಿಲ್ಲೆಯ ನೈಸರ್ಗಿಕ ಚಿಕಿತ್ಸಾ ಕೇಂದ್ರದಲ್ಲಿ ಆರು ತಿಂಗಳು ಯೋಗ ಶಿಕ್ಷಕನಾಗಿ ಕೆಲಸ ಮಾಡಿದ ಅನುಭವ ನನಗಿದೆ’ ಎಂದು ಯೋಗ ಶಿಕ್ಷಕ ರಾಜಕುಮಾರ ಹೇಳುತ್ತಾರೆ.</p>.<p>‘ಯೋಗದ ಮೂಲಕ ಅನೇಕ ರೋಗಳಿಗೆ ಚಿಕಿತ್ಸೆ ಇದೆ ಎನ್ನುವುದು ನನ್ನ ಸ್ವಂತಕ್ಕೆ ಬಂದ ಅನುಭವ. ಈ ಯೋಗ ಯಾವುದೇ ಒಂದು ಜಾತಿ ಸಮುದಾಯಕ್ಕೆ ಸೇರಿದ್ದಲ್ಲ. ರೋಗ ಮುಕ್ತ ಸಮಾಜ ಬಯಸುವವರು ಎಲ್ಲರೂ ಇದನ್ನು ಒಪ್ಪಿಕೊಂಡು ಪಾಲಿಸಬೇಕು’ ಎಂದರು.</p>.<p>’ಹತ್ತು ವರ್ಷಗಳಿಂದ ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೇ ಯೋಗ ತರಬೇತಿ ನೀಡುತ್ತಿದ್ದಾರೆ. ಇಂತವರು ಸಮಾಜದಲ್ಲಿ ಅಪರೂಪ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅಭಿಪ್ರಾಯಪಟ್ಟರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಔರಾದ್: ರೈತರಾಗಿರುವ ರಾಜಕುಮಾರ ನಾಯ್ಕ ಅವರು ಜನರಿಗೆ ಯೋಗ ಕಲಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಕರಂಜಿ (ಕೆ) ಗ್ರಾಮದ ರಾಜಕುಮಾರ ಅವರು ಬಾಲ್ಯದಿಂದಲೂ ಯೋಗದ ಬಗ್ಗೆ ತುಂಬಾ ಆಸಕ್ತಿ ಇಟ್ಟುಕೊಂಡವರು. ಹರಿದ್ವಾರಕ್ಕೆ ಹೋಗಿ ಮೂರು ತಿಂಗಳು ಯೋಗ ಹಾಗೂ ಅಧಾತ್ಮಕ ಜ್ಞಾನ ಪಡೆದುಕೊಂಡು ಬಂದ ನಂತರ ಜನರಿಗೆ ಯೋಗ ಕಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>‘ನಮ್ಮದು ರೋಗ ಮುಕ್ತ ಸಮಾಜ ಆಗಬೇಕು. ಕಳೆದ 10 ವರ್ಷಗಳಿಂದ ಯೋಗ ತರಬೇತಿ ಕೊಡುತ್ತಿದ್ದೇನೆ. ಇಲ್ಲಿಯ ತನಕ 200 ತಾಂಡಾಗಳಲ್ಲಿ ಯೋಗ ಶಿಬಿರ ನಡೆಸಿದ್ದೇನೆ. 100ಕ್ಕೂ ಹೆಚ್ಚು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಿದ್ದೇನೆ. ಬಾಗಲಕೋಟೆ ಜಿಲ್ಲೆಯ ನೈಸರ್ಗಿಕ ಚಿಕಿತ್ಸಾ ಕೇಂದ್ರದಲ್ಲಿ ಆರು ತಿಂಗಳು ಯೋಗ ಶಿಕ್ಷಕನಾಗಿ ಕೆಲಸ ಮಾಡಿದ ಅನುಭವ ನನಗಿದೆ’ ಎಂದು ಯೋಗ ಶಿಕ್ಷಕ ರಾಜಕುಮಾರ ಹೇಳುತ್ತಾರೆ.</p>.<p>‘ಯೋಗದ ಮೂಲಕ ಅನೇಕ ರೋಗಳಿಗೆ ಚಿಕಿತ್ಸೆ ಇದೆ ಎನ್ನುವುದು ನನ್ನ ಸ್ವಂತಕ್ಕೆ ಬಂದ ಅನುಭವ. ಈ ಯೋಗ ಯಾವುದೇ ಒಂದು ಜಾತಿ ಸಮುದಾಯಕ್ಕೆ ಸೇರಿದ್ದಲ್ಲ. ರೋಗ ಮುಕ್ತ ಸಮಾಜ ಬಯಸುವವರು ಎಲ್ಲರೂ ಇದನ್ನು ಒಪ್ಪಿಕೊಂಡು ಪಾಲಿಸಬೇಕು’ ಎಂದರು.</p>.<p>’ಹತ್ತು ವರ್ಷಗಳಿಂದ ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೇ ಯೋಗ ತರಬೇತಿ ನೀಡುತ್ತಿದ್ದಾರೆ. ಇಂತವರು ಸಮಾಜದಲ್ಲಿ ಅಪರೂಪ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅಭಿಪ್ರಾಯಪಟ್ಟರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>