ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಮ: ಜನತಾ ಜಲ ಧಾರೆ ಗಂಗಾ ರಥ ಯಾತ್ರೆಗೆ ಬಂಡೆಪ್ಪ ಕಾಶೆಂಪೂರ್ ಚಾಲನೆ

Last Updated 16 ಏಪ್ರಿಲ್ 2022, 6:55 IST
ಅಕ್ಷರ ಗಾತ್ರ

ಸಂಗಮ: ಜೆಡಿಎಸ್ನ ಜನತಾ ಜಲ ಧಾರೆ ಗಂಗಾ ರಥ ಯಾತ್ರೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ಶನಿವಾರ ಇಲ್ಲಿ ಚಾಲನೆ ನೀಡಿದರು. ದೇವಣಿ, ನಾರಂಜಾ ಹಾಗೂ ಕಾರಂಜಾ ನದಿಗಳು ಒಂದೆಡೆ ಸೇರುವ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಸಾಮೂಹಿಕ ಪೂಜೆ ಸಲ್ಲಿಸಿದರು.

ನದಿಗಳ ಸಂಗಮ ಕ್ಷೇತ್ರದಲ್ಲಿ ಮಹಿಳೆಯರು ಕೊಡಗಳಲ್ಲಿ ನೀರು ಸಂಗ್ರಹಿಸಿದರು. ಕಳಸಹೊತ್ತ ಮಹಿಳೆಯರು ಹಾಗೂ ಜೆಡಿಎಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಂಗಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ನಂತರ ಗಂಗಾ ರಥದಲ್ಲಿನ ಕಳಸದಲ್ಲಿ ಸಂಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಬಂಡೆಪ್ಪ ಕಾಶೆಂಪೂರ್, ಏಪ್ರಿಲ್ 20 ರಂದು ಬೀದರ್ ತಾಲ್ಲೂಕಿನಲ್ಲಿ ಸಮಾವೇಶ ಮಾಡಲಾಗುವುದು. ಎಚ್.ಡಿ.ದೇವೆಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಪಾಟೀಲ, ರಮೇಶ ಡಾಕೂಳಗಿ, ಐಲಿನ್ ಮಠಪತಿ, ಸಂಗೀತಾ ಪಾಟೀಲ, ಇರ್ಷಾದ್ ಖಾದ್ರಿ, ಅಶೋಕಕುಮಾರ ಕರಂಜೆ, ರಾಜಕುಮಾರ, ದೇವೇಂದ್ರ ಸೋನಿ, ರಾಜು ಕಡ್ಯಾಳ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT