<p><strong>ಖಟಕಚಿಂಚೋಳಿ: </strong>ಸಮೀಪದ ಚಳಕಾಪುರ ಗ್ರಾಮದಲ್ಲಿ ಭಾನುವಾರ ಸಿದ್ಧಾರೂಢ ಸ್ವಾಮೀಜಿಯ ರಥೋತ್ಸವ ಸಂಭ್ರಮದಿಂದ ಜರುಗಿತು.</p>.<p>ಬೀದರ್ನ ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿಸಂಜೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ್ದ ಸಿದ್ಧಾರೂಢರ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಶಾಸಕ ಈಶ್ವರ ಖಂಡ್ರೆ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ರಥೋತ್ಸವದಲ್ಲಿ ಭಾಗ ವಹಿಸಿದ ಭಕ್ತರು ಸಿದ್ಧಾರೂಢ ಸ್ವಾಮೀಜಿಗೆ ಜಯವಾಗಲಿ, ಸಿದ್ಧಾರೂಢರ ಜೋಳಿಗೆ ನಾಡಿಗೆಲ್ಲ ಹೋಳಿಗೆ ಯಾಗಲಿ ಎಂಬ ಘೋಷಣೆ ಕೂಗಿದರು.</p>.<p>ವಾದ್ಯ ಮೇಳಗಳೊಂದಿಗೆ ಬ್ರಹ್ಮವಿದ್ಯಾಶ್ರಮದಿಂದ ಹನುಮಾನ ಮಂದಿರದ ರಥ ಎಳೆಯಲಾಯಿತು. ರಥೋತ್ಸವ ಸಾಗುವಾಗ ಭಕ್ತರು ಶ್ರದ್ಧಾ, ಭಕ್ತಿಯಿಂದ ಕೈಮುಗಿದು, ಪಲ್ಲಕ್ಕಿಗೆ ಹೂ ಮಳೆ ಸುರಿಸಿದರು.</p>.<p>ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಬಂದಿದ್ದರು.</p>.<p>ಬ್ರಹ್ಮವಿದ್ಯಾಶ್ರಮದ ಶಂಕರಾನಂದ ಸ್ವಾಮೀಜಿ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ಬಾಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕುಲಕರ್ಣಿ, ಸುಭಾಷ ಕೆನಾಡೆ, ಪಂಚಾಯಿತಿ ಸದಸ್ಯ ಶಿವಪ್ಪ ರೊಟ್ಟಿ, ಶ್ರೀನಾಥ ಮಣಕೂಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಟಕಚಿಂಚೋಳಿ: </strong>ಸಮೀಪದ ಚಳಕಾಪುರ ಗ್ರಾಮದಲ್ಲಿ ಭಾನುವಾರ ಸಿದ್ಧಾರೂಢ ಸ್ವಾಮೀಜಿಯ ರಥೋತ್ಸವ ಸಂಭ್ರಮದಿಂದ ಜರುಗಿತು.</p>.<p>ಬೀದರ್ನ ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿಸಂಜೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ್ದ ಸಿದ್ಧಾರೂಢರ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು. ಶಾಸಕ ಈಶ್ವರ ಖಂಡ್ರೆ ರಥೋತ್ಸವಕ್ಕೆ ಚಾಲನೆ ನೀಡಿದರು.</p>.<p>ರಥೋತ್ಸವದಲ್ಲಿ ಭಾಗ ವಹಿಸಿದ ಭಕ್ತರು ಸಿದ್ಧಾರೂಢ ಸ್ವಾಮೀಜಿಗೆ ಜಯವಾಗಲಿ, ಸಿದ್ಧಾರೂಢರ ಜೋಳಿಗೆ ನಾಡಿಗೆಲ್ಲ ಹೋಳಿಗೆ ಯಾಗಲಿ ಎಂಬ ಘೋಷಣೆ ಕೂಗಿದರು.</p>.<p>ವಾದ್ಯ ಮೇಳಗಳೊಂದಿಗೆ ಬ್ರಹ್ಮವಿದ್ಯಾಶ್ರಮದಿಂದ ಹನುಮಾನ ಮಂದಿರದ ರಥ ಎಳೆಯಲಾಯಿತು. ರಥೋತ್ಸವ ಸಾಗುವಾಗ ಭಕ್ತರು ಶ್ರದ್ಧಾ, ಭಕ್ತಿಯಿಂದ ಕೈಮುಗಿದು, ಪಲ್ಲಕ್ಕಿಗೆ ಹೂ ಮಳೆ ಸುರಿಸಿದರು.</p>.<p>ಜಿಲ್ಲೆ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಬಂದಿದ್ದರು.</p>.<p>ಬ್ರಹ್ಮವಿದ್ಯಾಶ್ರಮದ ಶಂಕರಾನಂದ ಸ್ವಾಮೀಜಿ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ಬಾಯಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಿಶೋರ ಕುಲಕರ್ಣಿ, ಸುಭಾಷ ಕೆನಾಡೆ, ಪಂಚಾಯಿತಿ ಸದಸ್ಯ ಶಿವಪ್ಪ ರೊಟ್ಟಿ, ಶ್ರೀನಾಥ ಮಣಕೂಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>