‘ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವುದಾದರೆ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಹಾಕಬೇಕಿತ್ತು. ಆದರೆ, ಬಸವಕಲ್ಯಾಣದಲ್ಲಿ ಮಾತ್ರ ಕಾಂಗ್ರೆಸ್ನಲ್ಲಿದ್ದ ಮುಸ್ಲಿಮ್ ಮುಖಂಡರೊಬ್ಬರನ್ನು ಸೆಳೆದು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಜೆಡಿಎಸ್ ಮುಸ್ಲಿಮರನ್ನು ಬಳಕೆ ಮಾತ್ರ ಮಾಡಿಕೊಳ್ಳುತ್ತ ಬಂದಿದೆ. ಅನೇಕರನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗಿದೆ. ಹಿಂದೆ ಬೀದರ್ ಉಪ ಚುನಾವಣೆಯಲ್ಲಿ ಅಯಾಜ್ಖಾನ್ ಅವರಿಗೆ ಕೈ ಕೊಟ್ಟಿತ್ತು’ ಎಂದು ಟೀಕಿಸಿದರು.