ಬೀದರ್: ನಗೆ ದೇವರು ಕೊಟ್ಟ ಅಮೂಲ್ಯ ವರ. ಸುಖ-ದುಃಖ ಎರಡರಲ್ಲಿಯೂ ನಗು ಮರೆಯಾಗಬಾರದು. ಇದೊಂದು ಅಂತರಂಗ ಸೌಂದರ್ಯ. ನಗುಮುಖದಿಂದ ನಮ್ಮ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ನಗುವುದರಿಂದ ಆರೋಗ್ಯ ಸರಿಯಾಗಿ ಇರುತ್ತದೆ. ಸಕರಾತ್ಮಕ ಭಾವನೆಗಳು ಅಳವಡಿಸಿಕೊಂಡಾಗ ನಗು ಮರೆಯಾಗುವುದಿಲ್ಲ. `ನಗುವ ನಗಿಸುವ ನಗಿಸಿ ನಗುತ್ತ ಬಾಳುವ ವರವಮಿಗೆ ನೀನು ಬೇಡಿಕೊಳ್ಳೊ ಮಂಕುತಿಮ್ಮ’ ಎಂಬ ನುಡಿ ಅರ್ಥಪೂರ್ಣ. ಕುಟಿಲ ನಗೆ, ಕೇವಲ ಸ್ವಾರ್ಥ ಸಾಧನೆಗೆ ನಗುವುದು, ಮತ್ತೊಬ್ಬರನ್ನು ಅಣಕಿಸಿ ಹೀಯಾಳಿಸಿ ನಗುವುದು ನಗೆಯಲ್ಲ. ಅಂತರಂಗದ ಹೊರಹೊಮ್ಮಿದ ಸಹಜ ನಗೆ ದೇವರು ಮೆಚ್ಚುತ್ತಾನೆ. ಪರಿಶುದ್ಧ ನಗೆಯಿಂದ ದೇವ ದರ್ಶನವಾಗುತ್ತದೆ.