ಕಲಬುರಗಿ ಜಿಲ್ಲೆಯ ಚಿಂಚೋಳಿ ಅರಣ್ಯ ಪ್ರದೇಶದಲ್ಲಿ ಚಿರತೆಗಳಿವೆ. ಅಲ್ಲಿ ಅವುಗಳಿಗೆ ಆಹಾರದ ಕೊರತೆ ಇಲ್ಲ. ಚಿರತೆಗಳು ನಿತ್ಯ 40ರಿಂದ 45 ಕಿ.ಮೀ ಸಂಚರಿಸುತ್ತವೆ. ತೆಲಂಗಾಣದಿಂದ ಬೀದರ್ ತಾಲ್ಲೂಕಿನ ಚಿಲ್ಲರ್ಗಿ, ಹಿಪ್ಪಳಗಾಂವ, ಚಾಂಬೋಳ ಮೂಲಕ ನದಿ ದಂಡೆಗುಂಟ ಜನವಾಡಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.