<p><strong>ಬೀದರ್: </strong>ಗುರು ಗುರುವಾಗಿಯೇ ಇರಬೇಕು. ಲಘುವಾಗಿ ವರ್ತಿಸಬಾರದು. ಸಣ್ಣತನ ತೋರಬಾರದು ಎಂದು ಉಪನ್ಯಾಸಕ ರಾಜಕುಮಾರ ಅಲ್ಲೂರೆ ನುಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗುರು ಆಗಿ ಈವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿದ ತೃಪ್ತಿ ತಮಗೆ ಇದೆ ಎಂದು ಹೇಳಿದರು.</p>.<p>ಬಾಲ್ಯದಲ್ಲಿ ಕುರಿಗಾಹಿಯಾಗಿ ದುಡಿದ, ಸರ್ಕಾರಿ ಶಾಲೆಯಲ್ಲಿ ಓದಿ ಉಪನ್ಯಾಸಕ ಹುದ್ದೆ ಗಿಟ್ಟಿಸಿಕೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು.</p>.<p>ಡಾ. ಕೆ. ರವೀಂದ್ರನಾಥ ಅವರ ಮಾರ್ಗದರ್ಶನದಲ್ಲಿ ‘ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಕನ್ನಡ ಶಾಸನಗಳು: ಸಾಂಸ್ಕೃತಿಕ ಅಧ್ಯಯನ’ ಕುರಿತು ಸಂಶೋಧನಾ ಪ್ರಬಂಧ ಬರೆದು ಅದೇ ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದ್ದನ್ನೂ ತೆರೆದಿಟ್ಟರು.</p>.<p>ಬೀದರ್ನ ಗಟ್ಟಿ ಸಂಶೋಧಕರಲ್ಲಿ ರಾಜಕುಮಾರ ಅಲ್ಲೂರೆ ಒಬ್ಬರು. ಪರಿಷತ್ತು ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.</p>.<p>ಸಾಹಿತಿ, ಸಾಧಕರ ಸಾಂಸ್ಕೃತಿಕ ಸಾಧನೆಗಳನ್ನು ಮನೆ ಮನಕ್ಕೆ ತಲುಪಿಸುವುದು ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದ ಆಶಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ತಿಳಿಸಿದರು.</p>.<p>ಪ್ರಾಚಾರ್ಯ ಡಾ. ಬಂಡಯ್ಯ ಸ್ವಾಮಿ ಮಾತನಾಡಿದರು. ದೇವೇಂದ್ರ ಕರಂಜೆ ಹಾಗೂ ಪ್ರತಿಭಾ ಮಂಚ್ ಸಂವಾದ ನಡೆಸಿಕೊಟ್ಟರು.</p>.<p>ಸಾಹಿತಿಗಳಾದ ಓಂಪ್ರಕಾಶ ದಡ್ಡೆ, ಈಶ್ವರಯ್ಯ ಕೋಡಂಬಲ್, ವಿದ್ಯಾವತಿ ಬಲ್ಲೂರ, ಶಿವರಾಜ ಪಾಟೀಲ ಜಗನ್ನಾಥ ಕಮಲಾಪುರೆ ಇದ್ದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಬಸವರಾಜ ಬಲ್ಲೂರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಗುರು ಗುರುವಾಗಿಯೇ ಇರಬೇಕು. ಲಘುವಾಗಿ ವರ್ತಿಸಬಾರದು. ಸಣ್ಣತನ ತೋರಬಾರದು ಎಂದು ಉಪನ್ಯಾಸಕ ರಾಜಕುಮಾರ ಅಲ್ಲೂರೆ ನುಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗುರು ಆಗಿ ಈವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿದ ತೃಪ್ತಿ ತಮಗೆ ಇದೆ ಎಂದು ಹೇಳಿದರು.</p>.<p>ಬಾಲ್ಯದಲ್ಲಿ ಕುರಿಗಾಹಿಯಾಗಿ ದುಡಿದ, ಸರ್ಕಾರಿ ಶಾಲೆಯಲ್ಲಿ ಓದಿ ಉಪನ್ಯಾಸಕ ಹುದ್ದೆ ಗಿಟ್ಟಿಸಿಕೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು.</p>.<p>ಡಾ. ಕೆ. ರವೀಂದ್ರನಾಥ ಅವರ ಮಾರ್ಗದರ್ಶನದಲ್ಲಿ ‘ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಕನ್ನಡ ಶಾಸನಗಳು: ಸಾಂಸ್ಕೃತಿಕ ಅಧ್ಯಯನ’ ಕುರಿತು ಸಂಶೋಧನಾ ಪ್ರಬಂಧ ಬರೆದು ಅದೇ ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದ್ದನ್ನೂ ತೆರೆದಿಟ್ಟರು.</p>.<p>ಬೀದರ್ನ ಗಟ್ಟಿ ಸಂಶೋಧಕರಲ್ಲಿ ರಾಜಕುಮಾರ ಅಲ್ಲೂರೆ ಒಬ್ಬರು. ಪರಿಷತ್ತು ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.</p>.<p>ಸಾಹಿತಿ, ಸಾಧಕರ ಸಾಂಸ್ಕೃತಿಕ ಸಾಧನೆಗಳನ್ನು ಮನೆ ಮನಕ್ಕೆ ತಲುಪಿಸುವುದು ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದ ಆಶಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ತಿಳಿಸಿದರು.</p>.<p>ಪ್ರಾಚಾರ್ಯ ಡಾ. ಬಂಡಯ್ಯ ಸ್ವಾಮಿ ಮಾತನಾಡಿದರು. ದೇವೇಂದ್ರ ಕರಂಜೆ ಹಾಗೂ ಪ್ರತಿಭಾ ಮಂಚ್ ಸಂವಾದ ನಡೆಸಿಕೊಟ್ಟರು.</p>.<p>ಸಾಹಿತಿಗಳಾದ ಓಂಪ್ರಕಾಶ ದಡ್ಡೆ, ಈಶ್ವರಯ್ಯ ಕೋಡಂಬಲ್, ವಿದ್ಯಾವತಿ ಬಲ್ಲೂರ, ಶಿವರಾಜ ಪಾಟೀಲ ಜಗನ್ನಾಥ ಕಮಲಾಪುರೆ ಇದ್ದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಬಸವರಾಜ ಬಲ್ಲೂರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>