<p><strong>ಬೀದರ್</strong>: ಸಾಹಿತ್ಯ ಎನ್ನುವುದು ಇಂದು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಕವನ, ಕಥೆ, ಕಾದಂಬರಿಗಳಂತಹ ಸಾಹಿತ್ಯ ರಚನೆಯಿಂದ ವ್ಯಕ್ತಿಯ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಸುನೀತಾ ಬಿರಾದಾರ ತಿಳಿಸಿದರು.</p>.<p>ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಇಂದು ಪರಸ್ಪರ ಮನಸ್ಸುಗಳು ಸಂಚುಕಿತಗೊಂಡು ಅನರ್ಥದಿಂದ ಅನಾಹುತಗಳಾಗುತ್ತಿವೆ. ಹೃದಯ ವೈಶಾಲ್ಯವಿಲ್ಲದೆ ಎಲ್ಲೆಲ್ಲೂ ಬರೀ ವಿವಾದಗಳು ಕಂಡುಬಂದು ಹೃದಯದ ಬೆಸುಗೆ ಕಡಿಮೆಯಾಗುತ್ತಿವೆ. ಮನಸ್ಸುಗಳನ್ನು ಒಂದುಗೂಡಿಸಿ, ಸಮಾಜವನ್ನು ಸಧೃಢವಾಗಿ ಕಟ್ಟುವ ಸಾಹಿತ್ಯಗಳನ್ನು ರಚನೆ ಮಾಡಬೇಕಾಗಿದೆ ಎಂದರು.</p>.<p>ಸಾಹಿತಿಗಳ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ದೇಶ-ದೇಶಗಳ ಮಧ್ಯೆ ಹಾಗೂ ಮಾನವನ ಮಧ್ಯೆ ಪ್ರೀತಿ-ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಸೇತುವೆಯಾಗಿ ಮಾಡಿಕೊಂಡು ಗಟ್ಟಿಯಾಗಿ ರಚನೆ ಮಾಡಬೇಕಾಗಿದೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ, ಕವಿಗಳು ಸಮಾಜಮುಖಿಯಾಗಿರಬೇಕು. ಕವಿಗಳಾಗುವವರು ಸದಾ ಅಧ್ಯಯನಶೀಲರಾಗಿರಬೇಕು. ನಾಡಿನ ಹೆಸರಾಂತ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡುವಂತಿರಬೇಕು ಎಂದು ನುಡಿದರು.</p>.<p>ನಿಘಂಟು ನೋಡುವುದರಿಂದ ಉತ್ತಮ ಕಾವ್ಯಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಕವಿತೆಗಳನ್ನು ವರ್ತಮಾನಕ್ಕೆ ಸಂಬಂಧಿಸಿದಂತೆ ರಚಿಸಿದರೆ ವ್ಯಕ್ತಿಯ ಹೃದಯಕ್ಕೆ ಮುಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘವು ಉದಯೋನ್ಮುಖ ಕವಿಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ದುಡಿಯುತ್ತಿದೆ. ಯುವಕರು ಹೆಚ್ಚು ಸಾಹಿತ್ಯದ ಕಡೆಗೆ ಒಲವು ತೋರಿಸಬೇಕು. ಇಂತಹ ಕವಿಗೋಷ್ಠಿಗಳಲ್ಲಿ ಪ್ರೇಕ್ಷಕರಾಗಿಯೂ ಪಾಲ್ಗೊಂಡು ಸಾಹಿತ್ಯದ ಕುರಿತು ಅಭಿರುಚಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಕರ್ನಾಟಕ ಕಾಲೇಜಿನ ಉಪನ್ಯಾಸಕಿ ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಪ್ರೊ. ಎಸ್.ಬಿ.ಬಿರಾದಾರ, ಶಂಕರರಾವ ಹೊನ್ನಾ, ಅಶೋಕ ಎಲಿ, ಶಿವಾನಂದ ಗುಂದಗಿ, ಪ್ರಕಾಶ ಕನ್ನಾಳೆ ಇದ್ದರು.</p>.<p>ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ವೈಷ್ಣವಿ ಮೂಲಗೆ ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಕಿರಣ ವಲ್ಲೆಪುರೆ ನಿರೂಪಿಸಿದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.</p>.<p><strong>ಕವಿಗೋಷ್ಠಿ</strong>: ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಮಾಂಗಲ್ಯದ ಮಹತ್ವ, ಸಾಹಿತ್ಯ ಸಂಘ, ಹಾರಕೂಡಶ್ರೀಗಳು, ಗುರುಶಿಷ್ಯರ ಸಂಬಂಧ, ತಂದೆ-ತಾಯಿ ಮಹತ್ವ, ಓಝೋನ್ ಪದರಿನ ಮಹತ್ವ, ಬದುಕಿನ ಬವಣೆ, ಪರಿಸರ ಹಾಗೂ ದೇಶಭಕ್ತಿ ಕುರಿತ ಕವನಗಳು ಮೂಡಿ ಬಂದವು.</p>.<p>ಎಸ್.ಬಿ.ಕುಚಬಾಳ, ಮಹಾರುದ್ರ ಡಾಕುಳಗೆ, ಮಹಾನಂದ ಮಡಕಿ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಮಹಾದೇವಿ ಕಪಲಾಪುರೆ, ಮಾನಾ ಸಂಗೀತಾ, ಸ್ವರೂಪಾ ನಾಗೂರೆ, ಅಂಬಿಕಾ ಬಿರಾದಾರ, ರಕ್ಷಿತಾ, ಮಹಾಂತೇಶ, ಪವನ ಬಾರೆ, ಕಿರಣ ವಲ್ಲೆಪುರೆ ಕವನ ವಾಚನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಸಾಹಿತ್ಯ ಎನ್ನುವುದು ಇಂದು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಕವನ, ಕಥೆ, ಕಾದಂಬರಿಗಳಂತಹ ಸಾಹಿತ್ಯ ರಚನೆಯಿಂದ ವ್ಯಕ್ತಿಯ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಸುನೀತಾ ಬಿರಾದಾರ ತಿಳಿಸಿದರು.</p>.<p>ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ್ದ ಸಾಹಿತ್ಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಇಂದು ಪರಸ್ಪರ ಮನಸ್ಸುಗಳು ಸಂಚುಕಿತಗೊಂಡು ಅನರ್ಥದಿಂದ ಅನಾಹುತಗಳಾಗುತ್ತಿವೆ. ಹೃದಯ ವೈಶಾಲ್ಯವಿಲ್ಲದೆ ಎಲ್ಲೆಲ್ಲೂ ಬರೀ ವಿವಾದಗಳು ಕಂಡುಬಂದು ಹೃದಯದ ಬೆಸುಗೆ ಕಡಿಮೆಯಾಗುತ್ತಿವೆ. ಮನಸ್ಸುಗಳನ್ನು ಒಂದುಗೂಡಿಸಿ, ಸಮಾಜವನ್ನು ಸಧೃಢವಾಗಿ ಕಟ್ಟುವ ಸಾಹಿತ್ಯಗಳನ್ನು ರಚನೆ ಮಾಡಬೇಕಾಗಿದೆ ಎಂದರು.</p>.<p>ಸಾಹಿತಿಗಳ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ದೇಶ-ದೇಶಗಳ ಮಧ್ಯೆ ಹಾಗೂ ಮಾನವನ ಮಧ್ಯೆ ಪ್ರೀತಿ-ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಸೇತುವೆಯಾಗಿ ಮಾಡಿಕೊಂಡು ಗಟ್ಟಿಯಾಗಿ ರಚನೆ ಮಾಡಬೇಕಾಗಿದೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ, ಕವಿಗಳು ಸಮಾಜಮುಖಿಯಾಗಿರಬೇಕು. ಕವಿಗಳಾಗುವವರು ಸದಾ ಅಧ್ಯಯನಶೀಲರಾಗಿರಬೇಕು. ನಾಡಿನ ಹೆಸರಾಂತ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡುವಂತಿರಬೇಕು ಎಂದು ನುಡಿದರು.</p>.<p>ನಿಘಂಟು ನೋಡುವುದರಿಂದ ಉತ್ತಮ ಕಾವ್ಯಗಳನ್ನು ಕಟ್ಟಲು ಸಾಧ್ಯವಾಗುತ್ತದೆ. ಕವಿತೆಗಳನ್ನು ವರ್ತಮಾನಕ್ಕೆ ಸಂಬಂಧಿಸಿದಂತೆ ರಚಿಸಿದರೆ ವ್ಯಕ್ತಿಯ ಹೃದಯಕ್ಕೆ ಮುಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘವು ಉದಯೋನ್ಮುಖ ಕವಿಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ದುಡಿಯುತ್ತಿದೆ. ಯುವಕರು ಹೆಚ್ಚು ಸಾಹಿತ್ಯದ ಕಡೆಗೆ ಒಲವು ತೋರಿಸಬೇಕು. ಇಂತಹ ಕವಿಗೋಷ್ಠಿಗಳಲ್ಲಿ ಪ್ರೇಕ್ಷಕರಾಗಿಯೂ ಪಾಲ್ಗೊಂಡು ಸಾಹಿತ್ಯದ ಕುರಿತು ಅಭಿರುಚಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಕರ್ನಾಟಕ ಕಾಲೇಜಿನ ಉಪನ್ಯಾಸಕಿ ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಪ್ರೊ. ಎಸ್.ಬಿ.ಬಿರಾದಾರ, ಶಂಕರರಾವ ಹೊನ್ನಾ, ಅಶೋಕ ಎಲಿ, ಶಿವಾನಂದ ಗುಂದಗಿ, ಪ್ರಕಾಶ ಕನ್ನಾಳೆ ಇದ್ದರು.</p>.<p>ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ವೈಷ್ಣವಿ ಮೂಲಗೆ ಪ್ರಾರ್ಥಿಸಿದರು. ಸಂಶೋಧನಾ ವಿದ್ಯಾರ್ಥಿ ಕಿರಣ ವಲ್ಲೆಪುರೆ ನಿರೂಪಿಸಿದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.</p>.<p><strong>ಕವಿಗೋಷ್ಠಿ</strong>: ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಮಾಂಗಲ್ಯದ ಮಹತ್ವ, ಸಾಹಿತ್ಯ ಸಂಘ, ಹಾರಕೂಡಶ್ರೀಗಳು, ಗುರುಶಿಷ್ಯರ ಸಂಬಂಧ, ತಂದೆ-ತಾಯಿ ಮಹತ್ವ, ಓಝೋನ್ ಪದರಿನ ಮಹತ್ವ, ಬದುಕಿನ ಬವಣೆ, ಪರಿಸರ ಹಾಗೂ ದೇಶಭಕ್ತಿ ಕುರಿತ ಕವನಗಳು ಮೂಡಿ ಬಂದವು.</p>.<p>ಎಸ್.ಬಿ.ಕುಚಬಾಳ, ಮಹಾರುದ್ರ ಡಾಕುಳಗೆ, ಮಹಾನಂದ ಮಡಕಿ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಮಹಾದೇವಿ ಕಪಲಾಪುರೆ, ಮಾನಾ ಸಂಗೀತಾ, ಸ್ವರೂಪಾ ನಾಗೂರೆ, ಅಂಬಿಕಾ ಬಿರಾದಾರ, ರಕ್ಷಿತಾ, ಮಹಾಂತೇಶ, ಪವನ ಬಾರೆ, ಕಿರಣ ವಲ್ಲೆಪುರೆ ಕವನ ವಾಚನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>