ಕನ್ನಡ ಸೇನೆ ತಾಲ್ಲೂಕು ಘಟಕದ ಆಧ್ಯಕ್ಷ ದತ್ತು ಪರೀಟ ಲದ್ದಿ ಉಚಿತ ಮಾಸ್ಕ್ ವಿತರಿಸಿ ಮಾತನಾಡಿ,‘ಜನರ ಆರೋಗ್ಯದ ದ್ರಷ್ಟಿಯಿಂದ ತರಕಾರಿ ಮಾರಾಟಗಾರರು ಪ್ರಮುಖ ಪಾತ್ರವಹಿಸಲಿದ್ದು. ತರಕಾರಿ ಮಾರಾಟ ಮಾಡುವಾಗ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ತರಕಾರಿ ಮಾರಾಟ ಮಾಡಬೇಕು’ ಎಂದರು. ಪುರಸಭೆ ಸದಸ್ಯ ವಿಜಯಕುಮಾರ ಭಾಸಪಳ್ಳಿ, ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಉಪಾಧ್ಯಕ್ಷ ಎಮ್ಡಿ ಮಹೇಬೂಬ್, ನಗರ ಅಧ್ಯಕ್ಷ ಸೋಮನಾಥ ಮಡಿವಾಳ, ನಾಗು ಗಾದಾ, ಮಚ್ಚೆಂದ್ರ ಗವಳಿ, ಆನಂದ ಮಾಳಗೆ, ವಿಜಯಕುಮಾರ, ಬಾಲಾಜಿ, ಹಾಗೂ ಶಿವಕುಮಾರ ಇದ್ದರು.