<p><strong>ಬೀದರ್:</strong> ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಬಸವ ಸೇವಾ ಪ್ರತಿಷ್ಠಾನದ ವತಿಯಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ಮೂರು ವಚನ ವಿಜಯೋತ್ಸವಕ್ಕೆ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.</p>.<p>ಬಸವಗಿರಿಯ ಪರುಶ ಕಟ್ಟೆಯ ಆವರಣದಲ್ಲಿ ಚಿಕ್ಕದಾದ ಪೆಂಡಾಲ್ ಹಾಕಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಯಿತು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ನೂರಾರು ಶರಣ ಶರಣರೆಯರಿಂದ 'ಸಾಮೂಹಿಕ ಇಷ್ಟಲಿಂಗ ಯೋಗ' ನೆರವೇರಿತು.</p>.<p>ಶ್ವೇತ ಉಡುಪು, ಕಾವಿ ಸ್ಕಾರ್ಫ್ ತೊಟ್ಟ ಶರಣರು ಹಣೆಯ ಮೇಲೆ ವಿಭೂತಿ ಬಳಿದುಕೊಂಡು ಎಡಗೈಯಲ್ಲಿ ಇಷ್ಟಲಿಂಗವಿರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಅಕ್ಕ ಗಂಗಾಂಬಿಕೆ ಅವರು ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮಕ್ಕಳು ಹಾಗೂ ಯುವಕರಲ್ಲಿ ಪ್ರೇರಣೆ ತುಂಬಿದರು.</p>.<p>‘ಬಸವಣ್ಣನವರು ಸ್ವಯಂ ಗುರುವಾಗಿ ಇಷ್ಟಲಿಂಗ ಎನ್ನುವ ವಿನೂತನ ದೇವ ತತ್ವದ ಅಡಿಪಾಯ ಹಾಕಿದ್ದಾರೆ. ಇಷ್ಟಲಿಂಗ ಯೋಗವು ಆರೋಗ್ಯ ಹಾಗೂ ಆಯುಷ್ಯ ಪಡೆಯುವ ವಿಧಾನವಾಗಿದೆ. ಪ್ರತಿಯೊಬ್ಬರು ಶರಣ ತತ್ವ ಪಾಲನೆಯ ಮೂಲಕ ಕೃತಾರ್ಥರಾಗಬೇಕು’ ಎಂದು ಹೇಳಿದರು.</p>.<p>‘ಲಿಂಗ ಪೂಜೆಯ ಮೂಲಕ ಆಧ್ಮಾತ್ಮಿಕ ಶಕ್ತಿಯನ್ನು ಜಾಗೃತ ಮಾಡಿಕೊಳ್ಳಬೇಕು. ವೈಯಕ್ತಿಕ ಪ್ರಗತಿ ಸಾಧಿಸುವ ಮೂಲಕ ಪರಿಸರದ ಅಭಿವೃದ್ಧಿಗೆ ನೆರವಾಗಬಹುದು’ ಎಂದು ತಿಳಿಸಿದರು.</p>.<p>ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಉಷಾ ಮಿರ್ಚೆ ವೇದಿಕೆಯಲ್ಲಿದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಮೀರಾ ಗಿರೀಶ ಖೇಣಿ ಪ್ರಸಾದ ವ್ಯವಸ್ಥೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಬಸವ ಸೇವಾ ಪ್ರತಿಷ್ಠಾನದ ವತಿಯಂದ ನಗರದ ಬಸವಗಿರಿಯಲ್ಲಿ ಆಯೋಜಿಸಿರುವ ಮೂರು ವಚನ ವಿಜಯೋತ್ಸವಕ್ಕೆ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.</p>.<p>ಬಸವಗಿರಿಯ ಪರುಶ ಕಟ್ಟೆಯ ಆವರಣದಲ್ಲಿ ಚಿಕ್ಕದಾದ ಪೆಂಡಾಲ್ ಹಾಕಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಯಿತು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಪಾಟೀಲ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ನೂರಾರು ಶರಣ ಶರಣರೆಯರಿಂದ 'ಸಾಮೂಹಿಕ ಇಷ್ಟಲಿಂಗ ಯೋಗ' ನೆರವೇರಿತು.</p>.<p>ಶ್ವೇತ ಉಡುಪು, ಕಾವಿ ಸ್ಕಾರ್ಫ್ ತೊಟ್ಟ ಶರಣರು ಹಣೆಯ ಮೇಲೆ ವಿಭೂತಿ ಬಳಿದುಕೊಂಡು ಎಡಗೈಯಲ್ಲಿ ಇಷ್ಟಲಿಂಗವಿರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಅಕ್ಕ ಗಂಗಾಂಬಿಕೆ ಅವರು ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮಕ್ಕಳು ಹಾಗೂ ಯುವಕರಲ್ಲಿ ಪ್ರೇರಣೆ ತುಂಬಿದರು.</p>.<p>‘ಬಸವಣ್ಣನವರು ಸ್ವಯಂ ಗುರುವಾಗಿ ಇಷ್ಟಲಿಂಗ ಎನ್ನುವ ವಿನೂತನ ದೇವ ತತ್ವದ ಅಡಿಪಾಯ ಹಾಕಿದ್ದಾರೆ. ಇಷ್ಟಲಿಂಗ ಯೋಗವು ಆರೋಗ್ಯ ಹಾಗೂ ಆಯುಷ್ಯ ಪಡೆಯುವ ವಿಧಾನವಾಗಿದೆ. ಪ್ರತಿಯೊಬ್ಬರು ಶರಣ ತತ್ವ ಪಾಲನೆಯ ಮೂಲಕ ಕೃತಾರ್ಥರಾಗಬೇಕು’ ಎಂದು ಹೇಳಿದರು.</p>.<p>‘ಲಿಂಗ ಪೂಜೆಯ ಮೂಲಕ ಆಧ್ಮಾತ್ಮಿಕ ಶಕ್ತಿಯನ್ನು ಜಾಗೃತ ಮಾಡಿಕೊಳ್ಳಬೇಕು. ವೈಯಕ್ತಿಕ ಪ್ರಗತಿ ಸಾಧಿಸುವ ಮೂಲಕ ಪರಿಸರದ ಅಭಿವೃದ್ಧಿಗೆ ನೆರವಾಗಬಹುದು’ ಎಂದು ತಿಳಿಸಿದರು.</p>.<p>ಪ್ರತಿಷ್ಠಾನದ ಆಡಳಿತಾಧಿಕಾರಿ ಶಂಕರೆಪ್ಪ ಹೊನ್ನಾ, ಉಷಾ ಮಿರ್ಚೆ ವೇದಿಕೆಯಲ್ಲಿದ್ದರು. ಶಿವಕುಮಾರ ಪಾಂಚಾಳ ವಚನ ಗಾಯನ ಮಾಡಿದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಮೀರಾ ಗಿರೀಶ ಖೇಣಿ ಪ್ರಸಾದ ವ್ಯವಸ್ಥೆ ಮಾಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>