ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಯುಕ್ತ ಬಸವಕಲ್ಯಾಣ ತಾಲ್ಲೂಕಿನ ತಾಂಡಾಗಳಲ್ಲಿ ಸಂಚರಿಸಿದಸಚಿವ ಪ್ರಭು ಚವಾಣ್ ಅವರು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರವಾಗಿ ಮತಯಾಚಿಸಿದರು.
ಹಾಲಹಿಪ್ಪರಗಾ ತಾಂಡಾ, ಹತ್ಯಾಳ ಎ, ಹತ್ಯಾಳ ಬಿ ತಾಂಡಾ ಹಾಗೂ ಹಾರಕೂಡ ತಾಂಡಾಗಳಲ್ಲಿ ಸಂಚರಿಸಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕರಪತ್ರಗಳನ್ನು ಮತದಾರರಿಗೆ ಕೊಟ್ಟು ಮತಯಾಚನೆ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಣ್ಣಾರಾವ್ ರಾಠೋಡ್, ಮುಖಂಡರಾದ ದಿಲೀಪ ರಾಠೋಡ್, ಜಗನ್ನಾಥ ಆಡೆ, ಅನಿಲ ಚವಾಣ್, ಸುನೀಲ ರಾಠೋಡ್, ಅಮರ್ ಬಡದಾಳೆ ಪಾಲ್ಗೊಂಡಿದ್ದರು.