ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಲೂರ್ ರಸ್ತೆಯಲ್ಲಿ 6 ವರ್ಷದ ಹಿಂದೆ ನಾಗೇಶ್ವರಿ ಹೋಟೆಲ್ ನಡೆಸಲಾಗುತ್ತಿದ್ದು, ಇದರ ಪಕ್ಕದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾಸಕರು ನಿವೇಶನ ಖರೀದಿಸಿ ನೋಂದಣಿ ಮಾಡಿ ಕೊಂಡಿದ್ದಾರೆ. ಇನ್ನೂ ಮುಟೇಷನ್ ಆಗಿಲ್ಲ. ಆದರೂ ಶಾಸಕರ ಸಮ್ಮುಖ ದಲ್ಲಿ ಪೊಲೀಸ್ ಅಧಿಕಾರಿಗಳು, ಟೌನ್ ಪ್ಲ್ಯಾನಿಂಗ್ ಅಧಿಕಾರಿಗಳು ಅಕ್ಕಪಕ್ಕದವರಿಗೆ ನೋಟಿಸ್ ನೀಡದೇ ಬೌಂಡರಿ ನಿರ್ಧಾರ ಮಾಡುತ್ತಿದ್ದರು. ಆಗ ನಾನು ನೋಟಿಸ್ ನೀಡದೇ ನಿವೇಶನ ಅಳತೆ ಮಾಡುತ್ತಿರುವುದರ ಬಗ್ಗೆ ಅಧಿಕಾರಿಗಳನ್ನು ಕೇಳುತ್ತಿದ್ದಾಗ ಶಾಸಕರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಆಗ ಬಂದ ಶಾಸಕರ ಸಹೋದರರಾದ ಎಂಎಲ್ಸಿ ಡಾ. ಚಂದ್ರಶೇಖರ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ ಸಹ ಕೊಲೆ ಬೆದರಿಕೆ ಹಾಕಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎನ್ನುವ ಕಾರಣ ಪಿಎಸ್ಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ’ ಎಂದು ಹೇಳಿದರು.