<p><strong>ಬಸವಕಲ್ಯಾಣ: </strong>‘ಎಂ.ಎಂ.ಕಲಬುರ್ಗಿಯವರು ಬರೀ ಸಂಶೋಧಕರಲ್ಲ; ಸತ್ಯಶೋಧಕರಾಗಿದ್ದರು. ಶಾಸನಗಳು ಮತ್ತು ಸಾಹಿತ್ಯದಲ್ಲಿನ ಸತ್ಯವನ್ನು ತೆರೆದಿಟ್ಟರು’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಅಭಿಪ್ರಾಯಪಟ್ಟರು.</p>.<p>ನಗರದ ಅಲ್ಲಮಪ್ರಭು ಪದವಿ ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಈಚೆಗೆ ನಡೆದ ಡಾ.ಎಂ.ಎಂ.ಕಲಬುರ್ಗಿ ಅವರ ಜನ್ಮದಿನಾಚರಣೆ ಹಾಗೂ ಕಲಬುರ್ಗಿ ಅವರ ಸಾಹಿತ್ಯಾವಲೋಕನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಲಬುರ್ಗಿಯವರು ಕನ್ನಡದ ಜ್ಞಾನ ಪರಂಪರೆಯ ಬಹುದೊಡ್ಡ ಧಾರೆಯಾಗಿದ್ದರು. ಶಾಸನಗಳ ಅಧ್ಯಯನ, ಸಂಶೋಧನೆ ಅವರ ಇಷ್ಟದ ಕ್ಷೇತ್ರಗಳಾಗಿದ್ದವು. ಅವರು ನೇರ ನಿರ್ಭಿಡೆಯ ವ್ಯಕ್ತಿ ಆಗಿದ್ದರು’ ಎಂದರು.</p>.<p>ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ,‘ಕನ್ನಡ ಮತ್ತು ವಚನಗಳು ಕಲಬುರ್ಗಿಯವರ ಇಷ್ಟದ ಮತ್ತು ಕಾಳಜಿಯ ಕೇಂದ್ರಗಳಾಗಿದ್ದವು. ವಚನಗಳನ್ನು ಧಾರ್ಮಿಕ ಶ್ಲೋಕಗಳೆನ್ನದೆ ಸಾಂಸ್ಕೃತಿಕ ಆಕರಗಳನ್ನಾಗಿ ಪರಿಗಣಿಸಿದರು. ಮರಾಠಿ, ತೆಲುಗು, ತಮಿಳು ಶಾಸನಾಧ್ಯಯನಕ್ಕೂ ಮಹತ್ವ ನೀಡಿದರು’ ಎಂದರು.</p>.<p>ನಿವೃತ್ತ ಉಪನ್ಯಾಸಕ ಪ್ರೊ.ಸಿ.ಬಿ.ಪ್ರತಾಪುರೆ, ಪ್ರಾಂಶುಪಾಲ ಚಂದ್ರಕಾಂತ ಅಕ್ಕಣ್ಣ, ರಿಯಾಜ್ ಪಟೇಲ್, ಆನಂದ ಚಾಕೂರೆ ಹಾಗೂ ಪ್ರಭು ಮಾತನಾಡಿದರು.</p>.<p>ಕ್ರಾಂತಿಕುಮಾರ ಪಂಚಾಳ, ಸಾರಿಕಾ ಜೋಷಿ, ಸಮರೀನ್, ಶಿಲ್ಪಾ, ತ್ರಿಲೋಚನ ಪಂಚಾಳ, ಶ್ರೀನಿವಾಸ ಶಿಂಧೆ, ಇರ್ಫಾನ್ ಪಟೇಲ್, ವಿಶಾಲ ಗಾಯಕವಾಡ ಹಾಗೂ ಕಾವೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>‘ಎಂ.ಎಂ.ಕಲಬುರ್ಗಿಯವರು ಬರೀ ಸಂಶೋಧಕರಲ್ಲ; ಸತ್ಯಶೋಧಕರಾಗಿದ್ದರು. ಶಾಸನಗಳು ಮತ್ತು ಸಾಹಿತ್ಯದಲ್ಲಿನ ಸತ್ಯವನ್ನು ತೆರೆದಿಟ್ಟರು’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಅಭಿಪ್ರಾಯಪಟ್ಟರು.</p>.<p>ನಗರದ ಅಲ್ಲಮಪ್ರಭು ಪದವಿ ಕಾಲೇಜಿನಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಈಚೆಗೆ ನಡೆದ ಡಾ.ಎಂ.ಎಂ.ಕಲಬುರ್ಗಿ ಅವರ ಜನ್ಮದಿನಾಚರಣೆ ಹಾಗೂ ಕಲಬುರ್ಗಿ ಅವರ ಸಾಹಿತ್ಯಾವಲೋಕನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಲಬುರ್ಗಿಯವರು ಕನ್ನಡದ ಜ್ಞಾನ ಪರಂಪರೆಯ ಬಹುದೊಡ್ಡ ಧಾರೆಯಾಗಿದ್ದರು. ಶಾಸನಗಳ ಅಧ್ಯಯನ, ಸಂಶೋಧನೆ ಅವರ ಇಷ್ಟದ ಕ್ಷೇತ್ರಗಳಾಗಿದ್ದವು. ಅವರು ನೇರ ನಿರ್ಭಿಡೆಯ ವ್ಯಕ್ತಿ ಆಗಿದ್ದರು’ ಎಂದರು.</p>.<p>ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ,‘ಕನ್ನಡ ಮತ್ತು ವಚನಗಳು ಕಲಬುರ್ಗಿಯವರ ಇಷ್ಟದ ಮತ್ತು ಕಾಳಜಿಯ ಕೇಂದ್ರಗಳಾಗಿದ್ದವು. ವಚನಗಳನ್ನು ಧಾರ್ಮಿಕ ಶ್ಲೋಕಗಳೆನ್ನದೆ ಸಾಂಸ್ಕೃತಿಕ ಆಕರಗಳನ್ನಾಗಿ ಪರಿಗಣಿಸಿದರು. ಮರಾಠಿ, ತೆಲುಗು, ತಮಿಳು ಶಾಸನಾಧ್ಯಯನಕ್ಕೂ ಮಹತ್ವ ನೀಡಿದರು’ ಎಂದರು.</p>.<p>ನಿವೃತ್ತ ಉಪನ್ಯಾಸಕ ಪ್ರೊ.ಸಿ.ಬಿ.ಪ್ರತಾಪುರೆ, ಪ್ರಾಂಶುಪಾಲ ಚಂದ್ರಕಾಂತ ಅಕ್ಕಣ್ಣ, ರಿಯಾಜ್ ಪಟೇಲ್, ಆನಂದ ಚಾಕೂರೆ ಹಾಗೂ ಪ್ರಭು ಮಾತನಾಡಿದರು.</p>.<p>ಕ್ರಾಂತಿಕುಮಾರ ಪಂಚಾಳ, ಸಾರಿಕಾ ಜೋಷಿ, ಸಮರೀನ್, ಶಿಲ್ಪಾ, ತ್ರಿಲೋಚನ ಪಂಚಾಳ, ಶ್ರೀನಿವಾಸ ಶಿಂಧೆ, ಇರ್ಫಾನ್ ಪಟೇಲ್, ವಿಶಾಲ ಗಾಯಕವಾಡ ಹಾಗೂ ಕಾವೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>