<p>ಔರಾದ್: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಒಂದು ಕಡೆ ಬೆಳೆ ಹಾನಿಯಾದರೆ ಮತ್ತೊಂದು ಕಡೆ ಹಳ್ಳ, ಕೆರೆ-ಕಟ್ಟೆಗಳು ತುಂಬಿ ಮಳೆಗಾಲದ ವೈಭವ ಮೆರೆಯುತ್ತಿದೆ.</p>.<p>ಕೆರೆಗಳ ತಾಲ್ಲೂಕು ಎಂಬ ಖ್ಯಾತಿ ಪಡೆದ ಔರಾದ್ ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚು ಕೆರೆಗಳಿವೆ. ಈ ಮಳೆಯಿಂದಾಗಿ ಬಹುತೇಕ ಎಲ್ಲ ಕೆರೆಗಳು ತುಂಬಿ ಪರಿಸರದ ಸೌಂದರ್ಯ ಹೆಚ್ಚಿಸಿದೆ. </p>.<p>ತಾಲ್ಲೂಕಿನ ತೇಂಗಪೂರ ಕೆರೆ ಬಹುತೇಕ ತುಂಬಿ ನೀರು ಹೊರ ಹೋಗುತ್ತಿದೆ. ಈ ಹರಿಯುತ್ತಿರುವ ಹಾಲ್ನೊರೆ ಕಂಡು ಸುತ್ತಲಿನ ಜನ ಪುಳಕಿತರಾಗಿದ್ದಾರೆ. ಮಂಗಳವಾರ ಮಳೆ ಬಿಡುವು ಕೊಟ್ಟಾಗ ಸುತ್ತಲಿನ ಶಾಲಾ ಕಾಲೇಜು ಮಕ್ಕಳು ಹಾಗೂ ಸ್ಥಳೀಯರು ಹಾಲ್ನೊರೆ ನೋಡಲು ಮುಗಿದು ಬೀಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಅಮರ ಮೊಕ್ತೆದಾರ ಹೇಳುತ್ತಾರೆ.</p>.<p>ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿಯೂ ತುಂಬಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಒಂದೆಡೆ ಆತಂಕ ಹಾಗೂ ಮತ್ತೊಂದೆಡೆ ಮಳೆ ವೈಭವದ ಸಂಭ್ರಮ ಕಾಣುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಇದು ದೊಡ್ಡ ಮಳೆಯಾಗಿದೆ. </p>.<p>ಬೇಸಿಗೆಯಲ್ಲಿ ಒಣಗಿಹೋಗಿದ್ದ ಅನೇಕ ಕೆರೆಗಳು ಈಗ ಮಳೆಯಿಂದ ತುಂಬಿ ಸಿರಿವಂತವಾಗಿ ಕಂಗೊಳಿಸುತ್ತಿವೆ. ಇದರಿಂದಾಗಿ ನೆಲದಡಿ ನೀರಿನ ಮಟ್ಟ ಏರಿಕೆಯಾಗಿದೆ. ಜಮೀನುಗಳ ಸುತ್ತಮುತ್ತ ಹಸಿರು ಚೈತನ್ಯ ಹರಡಿಕೊಂಡಿದೆ.</p>.<p>ಕೆರೆಗಳು ತುಂಬಿ ಹರಿಯುತ್ತಿರುವ ದೃಶ್ಯವನ್ನು ಕಂಡು ಗ್ರಾಮಸ್ಥರು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದು, ಮಳೆ ನಮಗೆ ನಿಜವಾದ ಜೀವನದ ದಾನ ನೀಡಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಔರಾದ್: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಒಂದು ಕಡೆ ಬೆಳೆ ಹಾನಿಯಾದರೆ ಮತ್ತೊಂದು ಕಡೆ ಹಳ್ಳ, ಕೆರೆ-ಕಟ್ಟೆಗಳು ತುಂಬಿ ಮಳೆಗಾಲದ ವೈಭವ ಮೆರೆಯುತ್ತಿದೆ.</p>.<p>ಕೆರೆಗಳ ತಾಲ್ಲೂಕು ಎಂಬ ಖ್ಯಾತಿ ಪಡೆದ ಔರಾದ್ ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚು ಕೆರೆಗಳಿವೆ. ಈ ಮಳೆಯಿಂದಾಗಿ ಬಹುತೇಕ ಎಲ್ಲ ಕೆರೆಗಳು ತುಂಬಿ ಪರಿಸರದ ಸೌಂದರ್ಯ ಹೆಚ್ಚಿಸಿದೆ. </p>.<p>ತಾಲ್ಲೂಕಿನ ತೇಂಗಪೂರ ಕೆರೆ ಬಹುತೇಕ ತುಂಬಿ ನೀರು ಹೊರ ಹೋಗುತ್ತಿದೆ. ಈ ಹರಿಯುತ್ತಿರುವ ಹಾಲ್ನೊರೆ ಕಂಡು ಸುತ್ತಲಿನ ಜನ ಪುಳಕಿತರಾಗಿದ್ದಾರೆ. ಮಂಗಳವಾರ ಮಳೆ ಬಿಡುವು ಕೊಟ್ಟಾಗ ಸುತ್ತಲಿನ ಶಾಲಾ ಕಾಲೇಜು ಮಕ್ಕಳು ಹಾಗೂ ಸ್ಥಳೀಯರು ಹಾಲ್ನೊರೆ ನೋಡಲು ಮುಗಿದು ಬೀಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಅಮರ ಮೊಕ್ತೆದಾರ ಹೇಳುತ್ತಾರೆ.</p>.<p>ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿಯೂ ತುಂಬಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಒಂದೆಡೆ ಆತಂಕ ಹಾಗೂ ಮತ್ತೊಂದೆಡೆ ಮಳೆ ವೈಭವದ ಸಂಭ್ರಮ ಕಾಣುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಇದು ದೊಡ್ಡ ಮಳೆಯಾಗಿದೆ. </p>.<p>ಬೇಸಿಗೆಯಲ್ಲಿ ಒಣಗಿಹೋಗಿದ್ದ ಅನೇಕ ಕೆರೆಗಳು ಈಗ ಮಳೆಯಿಂದ ತುಂಬಿ ಸಿರಿವಂತವಾಗಿ ಕಂಗೊಳಿಸುತ್ತಿವೆ. ಇದರಿಂದಾಗಿ ನೆಲದಡಿ ನೀರಿನ ಮಟ್ಟ ಏರಿಕೆಯಾಗಿದೆ. ಜಮೀನುಗಳ ಸುತ್ತಮುತ್ತ ಹಸಿರು ಚೈತನ್ಯ ಹರಡಿಕೊಂಡಿದೆ.</p>.<p>ಕೆರೆಗಳು ತುಂಬಿ ಹರಿಯುತ್ತಿರುವ ದೃಶ್ಯವನ್ನು ಕಂಡು ಗ್ರಾಮಸ್ಥರು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದು, ಮಳೆ ನಮಗೆ ನಿಜವಾದ ಜೀವನದ ದಾನ ನೀಡಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>