ಭಾಲ್ಕಿ: ‘ತಾಲ್ಲೂಕಿನ ಕೋನಮೇಳಕುಂದಾ ಗ್ರಾಮ ಪಂಚಾಯಿತಿಯ ಪಿ.ಡಿ.ಒ, ಅಧ್ಯಕ್ಷ ಸೇರಿಕೊಂಡು 2020–21ರಿಂದ 2023-24ನೇ ಸಾಲಿನ ವರೆಗೆ 14, 15ನೇ ಹಣಕಾಸು ಯೋಜನೆ, ಕರ ವಸೂಲಿ, ಉದ್ಯೋಗ ಖಾತ್ರಿಯ ಸೇರಿದಂತೆ ಇತರ ಮೂಲಗಳಿಂದ ಬಂದ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚರಣಜೀತ ಆಣದೂರೆ, ಉಪಾಧ್ಯಕ್ಷ ಪ್ರವೀಣ ಮೊಳಕೇರೆ ಸೇರಿದಂತೆ ಇತರರು ಆರೋಪಿಸಿದರು.