<p><strong>ಔರಾದ್</strong>: ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ಬುಧವಾರ ಬಾವಾ ಸ್ವಾಮಿ ಜಾತ್ರಾ ಉತ್ಸವ ಸಂಭ್ರಮದಿಂದ ನಡೆಯಿತು.</p>.<p>ದೇವಸ್ಥಾನದಲ್ಲಿ ಬೆಳಿಗ್ಗೆ ನಡೆದ ವಿಶೇಷ ಪೂಜೆ ನಂತರ ಇಡೀ ಊರಲ್ಲಿ ಪಲ್ಲಕಿ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಯುವಕರು ಡಿಜೆ ಹಾಡಿನ ಮೇಲೆ ಕುಣಿದು ಸಂಭ್ರಮಿಸಿದರು. ಜಾನಪದ ನೃತ್ಯದ ಮೇಲೆ ಮಹಿಳೆಯರು ಹೆಜ್ಜೆ ಹಾಕಿ ಭಕ್ತಿ ಭಾವ ಮೆರೆದರು.</p>.<p>‘ಬಾವಾ ಸ್ವಾಮಿ ನಮ್ಮ ಊರಿನ ಆರಾಧ್ಯ ದೇವರು. ಊರಿನ ಎಲ್ಲ ಸಮುದಾಯದವರು ಸೇರಿ ಪ್ರತಿ ವರ್ಷ ಜಾತ್ರಾ ಉತ್ಸವ ಆಚರಿಸುತ್ತೇವೆ. ಉತ್ಸವ ಮುನ್ನ ಏಳು ದಿನಗಳ ಕಾಲ ಸಪ್ತಾಹ ನಡೆಸಿ ನಿತ್ಯ ಪೂಜೆ, ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಇದು ನಮ್ಮ ಊರಿನಲ್ಲಿ ನಡೆಯುವ ಭಾವೈಕ್ಯದ ಹಬ್ಬ’ ಎಂದು ಊರಿನ ಹಿರಿಯ ನಾಗರಿಕ ಬಾಬುರಾವ ಸಜ್ಜನಶೆಟ್ಟಿ ಹೇಳಿದರು.</p>.<p>ಷಣ್ಮುಖಪ್ಪ ಕೌಟಗೆ, ಗದಗೆಪ್ಪ ಸಿದ್ದೇಶ್ವರೆ, ಶಂಕರ ಅವಳಗಾವೆ, ರವಿ ಮೇತ್ರೆ, ನಾಗಶೆಟ್ಟಿ ಪಾಟೀಲ, ಪ್ರಶಾಂತ ಬಿರಾದಾರ, ಹಾವಪ್ಪ ಪಾಟೀಲ, ಶಿವರಾಜ ಮದರಗಾವೆ, ವಿಠಲ್ ಮಾಲಿಪಾಟೀಲ, ಕಲ್ಲಯ್ಯ ಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ಬುಧವಾರ ಬಾವಾ ಸ್ವಾಮಿ ಜಾತ್ರಾ ಉತ್ಸವ ಸಂಭ್ರಮದಿಂದ ನಡೆಯಿತು.</p>.<p>ದೇವಸ್ಥಾನದಲ್ಲಿ ಬೆಳಿಗ್ಗೆ ನಡೆದ ವಿಶೇಷ ಪೂಜೆ ನಂತರ ಇಡೀ ಊರಲ್ಲಿ ಪಲ್ಲಕಿ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಯುವಕರು ಡಿಜೆ ಹಾಡಿನ ಮೇಲೆ ಕುಣಿದು ಸಂಭ್ರಮಿಸಿದರು. ಜಾನಪದ ನೃತ್ಯದ ಮೇಲೆ ಮಹಿಳೆಯರು ಹೆಜ್ಜೆ ಹಾಕಿ ಭಕ್ತಿ ಭಾವ ಮೆರೆದರು.</p>.<p>‘ಬಾವಾ ಸ್ವಾಮಿ ನಮ್ಮ ಊರಿನ ಆರಾಧ್ಯ ದೇವರು. ಊರಿನ ಎಲ್ಲ ಸಮುದಾಯದವರು ಸೇರಿ ಪ್ರತಿ ವರ್ಷ ಜಾತ್ರಾ ಉತ್ಸವ ಆಚರಿಸುತ್ತೇವೆ. ಉತ್ಸವ ಮುನ್ನ ಏಳು ದಿನಗಳ ಕಾಲ ಸಪ್ತಾಹ ನಡೆಸಿ ನಿತ್ಯ ಪೂಜೆ, ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಇದು ನಮ್ಮ ಊರಿನಲ್ಲಿ ನಡೆಯುವ ಭಾವೈಕ್ಯದ ಹಬ್ಬ’ ಎಂದು ಊರಿನ ಹಿರಿಯ ನಾಗರಿಕ ಬಾಬುರಾವ ಸಜ್ಜನಶೆಟ್ಟಿ ಹೇಳಿದರು.</p>.<p>ಷಣ್ಮುಖಪ್ಪ ಕೌಟಗೆ, ಗದಗೆಪ್ಪ ಸಿದ್ದೇಶ್ವರೆ, ಶಂಕರ ಅವಳಗಾವೆ, ರವಿ ಮೇತ್ರೆ, ನಾಗಶೆಟ್ಟಿ ಪಾಟೀಲ, ಪ್ರಶಾಂತ ಬಿರಾದಾರ, ಹಾವಪ್ಪ ಪಾಟೀಲ, ಶಿವರಾಜ ಮದರಗಾವೆ, ವಿಠಲ್ ಮಾಲಿಪಾಟೀಲ, ಕಲ್ಲಯ್ಯ ಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>