ಅಂಗನವಾಡಿ ಕೇಂದ್ರ ಬಳಕೆ ಮಾಡದೇ ಇರುವ ಕಾರಣ ಸುತ್ತಲು ಹುಲ್ಲು, ಮುಳ್ಳಿನ ಕಂಟಿ ಬೆಳೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ಕೋಣೆಗಳು ಶಿಥಿಲಾವಸ್ಥೆ ತಲುಪಿವೆ. ಅವುಗಳನ್ನು ನೆಲಸಮ ಮಾಡಬೇಕು ಎಂದರು. ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರ ಓಣಿಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬೂಳಗೆ ಹಾಗೂ ಉಪನಿರ್ದೇಶಕ ಸಂತೋಷ ಚೌವ್ಹಾಣ್ ಅವರು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.