<p>ಚಿಟಗುಪ್ಪ: ‘ಆಧುನಿಕ ಸಮಾಜದಲ್ಲಿ ಎಲ್ಲ ರಂಗಗಳಲ್ಲಿ ಮಹಿಳೆ ಮುಂಚೂಣಿ ಯಲ್ಲಿರುವುದಕ್ಕೆ ಮೂಲ ಕಾರಣ ಸಾವಿತ್ರಿಬಾಯಿ ಫುಲೆ ಅವರ ಅವಿರತ ಶ್ರಮ’ ಎಂದು ಮುಖ್ಯಶಿಕ್ಷಕಿ ಸುಗಂಧಾ ಅವರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಚಾಂಗಲೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯ ರತ್ನ ಅಣ್ಣಾಬಾವು ಸಾಠೆ ಲೋಮಂಚ ನ್ಯಾಸ ಸಹಯೋಗದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಎಲ್ಲರೂ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ಶಿಕ್ಷಕ ಶಿವಕುಮಾರ ಹೂಗಾರ ಮಾತನಾಡಿ,‘ಫುಲೆ ದಂಪತಿ ಅಕ್ಷರಗಳನ್ನು ಬಳಸಿ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ವಿಶೇಷವಾಗಿ ನಿರ್ಗತಿಕರಿಗೆ, ಗರ್ಭಿಣಿಯರಿಗೆ, ವಿಧವೆಯವರಿಗೆ ಆಶ್ರಯದಾತರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದರು.</p>.<p>ಶಿಕ್ಷಕಿಯರಾದ ಶೋಭಾ, ಭುವನೇಶ್ವರಿ, ಗಾಯತ್ರಿ, ಕವಿತಾ, ಪ್ರತಿಭಾ ಹಾಗೂ ಇತರರನ್ನು ಸನ್ಮಾನಿಸಲಾಯಿತು.</p>.<p>ಪ್ರಭಾವತಿ, ಎಂ.ಎಸ್. ಮನೋಹರ್, ಮಲ್ಲಯ್ಯ ಸ್ವಾಮಿ, ಧರ್ಮಪ್ರಕಾಶ್ ಹಾಗೂ ಮಸ್ತಾನ ಇದ್ದರು.</p>.<p>ಶಿವಕುಮಾರ ನಿರೂಪಿಸಿದರು. ರಾಜಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಟಗುಪ್ಪ: ‘ಆಧುನಿಕ ಸಮಾಜದಲ್ಲಿ ಎಲ್ಲ ರಂಗಗಳಲ್ಲಿ ಮಹಿಳೆ ಮುಂಚೂಣಿ ಯಲ್ಲಿರುವುದಕ್ಕೆ ಮೂಲ ಕಾರಣ ಸಾವಿತ್ರಿಬಾಯಿ ಫುಲೆ ಅವರ ಅವಿರತ ಶ್ರಮ’ ಎಂದು ಮುಖ್ಯಶಿಕ್ಷಕಿ ಸುಗಂಧಾ ಅವರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಚಾಂಗಲೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯ ರತ್ನ ಅಣ್ಣಾಬಾವು ಸಾಠೆ ಲೋಮಂಚ ನ್ಯಾಸ ಸಹಯೋಗದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಎಲ್ಲರೂ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ಶಿಕ್ಷಕ ಶಿವಕುಮಾರ ಹೂಗಾರ ಮಾತನಾಡಿ,‘ಫುಲೆ ದಂಪತಿ ಅಕ್ಷರಗಳನ್ನು ಬಳಸಿ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದಾರೆ. ವಿಶೇಷವಾಗಿ ನಿರ್ಗತಿಕರಿಗೆ, ಗರ್ಭಿಣಿಯರಿಗೆ, ವಿಧವೆಯವರಿಗೆ ಆಶ್ರಯದಾತರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದರು.</p>.<p>ಶಿಕ್ಷಕಿಯರಾದ ಶೋಭಾ, ಭುವನೇಶ್ವರಿ, ಗಾಯತ್ರಿ, ಕವಿತಾ, ಪ್ರತಿಭಾ ಹಾಗೂ ಇತರರನ್ನು ಸನ್ಮಾನಿಸಲಾಯಿತು.</p>.<p>ಪ್ರಭಾವತಿ, ಎಂ.ಎಸ್. ಮನೋಹರ್, ಮಲ್ಲಯ್ಯ ಸ್ವಾಮಿ, ಧರ್ಮಪ್ರಕಾಶ್ ಹಾಗೂ ಮಸ್ತಾನ ಇದ್ದರು.</p>.<p>ಶಿವಕುಮಾರ ನಿರೂಪಿಸಿದರು. ರಾಜಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>