ಔರಾದ್: ಹಿಂದಿ ದಿವಸ ಆಚರಣೆ ವಿರೋಧಿಸಿ ಜೆಡಿಎಸ್ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳಿಗೆ ಪ್ರತ್ಯೇಕ ಭಾಷೆ ಬಳಕೆಗೆ ಅವಕಾಶವಿದೆ. ಆದರೆ ಸರ್ಕಾರ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಲು ಹೊರಟಿದೆ. ಹಿಂದಿ ದಿವಸ ಆಚರಣೆಯ ಮೂಲಕ ಕನ್ನಡಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತಾನಾಜಿ ತೋರಣೆಕರ್, ರಮೇಶ ಶೆಳಕೆ, ಬಸವರಾಜ ಅಲ್ಲಾಪುರ, ಸಂಜೀವ ಜಾಧವ್, ಸಂದೀಪ ಕೌಡಗಾವೆ, ಮುನೀರಸಾಬ್ ಸಂತಪುರ, ಕರ್ನಾಟಕ ರಕ್ಷಣಾ ವೇದಿಕೆಯ ಅನೀಲ ದೇವಕತೆ, ನರಸಿಂಗ ಹಕ್ಕೆ, ನಾರಾಯಣ ಕಾಂಬಳೆ, ನವೀನರಾಜ್ ಹಾಗೂ ನಾಗೇಶ ವಗ್ಗೆ ಇದ್ದರು.