ಬೀದರ್: ರೈತರ ಪಹಣಿಗಳಲ್ಲಿನ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾದ ಬೀದರ್ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಜೆ ಫಾರಂ ಅನ್ವಯ ಆಸ್ತಿ ಹಕ್ಕು ಬದಲಾವಣೆ ಸಕಾಲದಲ್ಲಿ ಮಾಡಬೇಕು. ಬಹರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು. ಅರ್ಧಕ್ಕೆ ನಿಂತಿರುವ ಫೋಡಿಮುಕ್ತ ಗ್ರಾಮ ಕೆಲಸ ಪೂರ್ಣಗೊಳಿಸಬೇಕು. ಶುಲ್ಕ ಕಟ್ಟಿದ ರೈತರ ಜಮೀನಿನ ಸರ್ವೇ ಕೂಡಲೇ ಮಾಡಬೇಕು ಒತ್ತಾಯಿಸಿದರು.