‘ವಿದ್ಯುತ್ ಪರಿವರ್ತಕ ಸುಟ್ಟಿರುವುದರಿಂದ ಸುಮಾರು 15 ದಿನಗಳಿಂದ ಬಡಾವಣೆಯ ಮೇಲಿನ ಓಣಿಯಲ್ಲಿ ವಿದ್ಯುತ್ ಇಲ್ಲವಾಗಿದೆ. ಹಗಲು ಹೊತ್ತಿನಲ್ಲಿ ಹೇಗಾದರೂ ದಿನ ಕಳೆಯಬಹುದು. ಆದರೆ, ಈ ಮಳೆ ಗಾಲದ ರಾತ್ರಿ ಸಮಯದಲ್ಲಿ ಹಾವು, ಕ್ರಿಮಿಕೀಟಗಳಿಂದ ಭಯ ಆಗುತ್ತಿದೆ. ಈ ಸಂಬಂಧ ನಾಲ್ಕೈದು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ’ ಎಂದು ನಿವಾಸಿಗಳಾದ ಶಿವಕುಮಾರ, ಮಲ್ಲಿಕಾರ್ಜುನ, ಸಂಗಮೇಶ, ಸಿದ್ದಲಿಂಗ, ಶಾಮ, ಮಾಳಸಕಾಂತ ವಾಘೆ ಹೇಳಿದರು.