ಬೀದರ್: ಕಮಲನಗರ ತಾಲ್ಲೂಕಿನ ಖತಗಾಂವ್ ಗ್ರಾಮದ ಹಿರಿಯರಾದ ಪುತಳಾಬಾಯಿ ಶಿವಗೆಪ್ಪ ಸ್ವಾಮಿ (75) ಗುರುವಾರ ನಿಧನರಾದರು.
ಅವರಿಗೆ ಪತ್ರಕರ್ತ ಸಿದ್ರಾಮಯ್ಯ ಸ್ವಾಮಿ ಸೇರಿ ಇಬ್ಬರು ಪುತ್ರರು ಇದ್ದಾರೆ. ಸ್ವಗ್ರಾಮ ಖತಗಾಂವ್ನ ಹೊಲದಲ್ಲಿ ಶುಕ್ರವಾರ (ಡಿ.9) ಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.