ಮೃತ ಭಾಗ್ಯೇಶ ಹಾಗೂ ತಾಯಿ ಅನಿತಾ ಮತ್ತು ಈತನ ಅಣ್ಣ, ಚಿಕ್ಕಮ್ಮ ಈ ನಾಲ್ವರು ತೊಗರಿಯ ಉರುವಲು ತೆಗೆದುಕೊಡು ಬರುವುದಕ್ಕೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಮಳೆ ಆರಂಭ ಆಗಿದ್ದರಿಂದ ಮನೆ ಕಡೆಗೆ ಹೊರಟಿದ್ದರು. ರಸ್ತೆ ಮಧ್ಯದಲ್ಲಿನ ಖೂನಿನಾಲೆ ಮಳೆ ನೀರಿನಿಂದ ತುಂಬಿ ಹರಿಯುತ್ತಿತ್ತು. ಆದ್ದರಿಂದ ಕೆಲಕಾಲ ನಾಲೆಯ ಆ ಕಡೆ ನಿಂತಿದ್ದರಾದರೂ ಮಳೆ ಪ್ರಮಾಣ ಹೆಚ್ಚುತ್ತಿದ್ದರಿಂದ ನಾಲೆ ದಾಟಲು ಅವರು ಯತ್ನಿಸಿದ್ದಾರೆ.